Select Your Language

Notifications

webdunia
webdunia
webdunia
webdunia

ಸೆಲ್ಫಿ ಹುಚ್ಚಲ್ಲಿ ಪ್ರಾಣಕ್ಕೆ ಕುತ್ತು ತಂದುಕೊಂಡ ಗೆಳೆಯರು

ಸೆಲ್ಫಿ ಹುಚ್ಚು
ಆನೇಕಲ್ , ಬುಧವಾರ, 9 ನವೆಂಬರ್ 2016 (09:32 IST)
ಸೆಲ್ಫಿ ಹುಚ್ಚು ಎರಡು ವಿದ್ಯಾರ್ಥಿಗಳ ಸಾವಿನ ದವಡೆಗೆ ದೂಡಿದ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಕೊಳದಲ್ಲಿ ನಡೆದಿದೆ.
 
ಮೃತರನ್ನು ಬೆಂಗಳೂರಿನ ಯಲಚೇನಹಳ್ಳಿಯ ಪ್ರಶಾಂತ(17) ಹಾಗೂ ಜೀವನ್ ಕುಮಾರ್ (17) ಮೃತ ಗೆಳೆಯರಾಗಿದ್ದಾರೆ.
 
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದ ಗೆಳೆಯರಿಬ್ಬರು  ತಮ್ಮ ಇತರ 12 ಜನ ಗೆಳೆಯರ ಜತೆ ಸುವರ್ಣಮುಖಿ ವೀಕ್ಷಿಸಲು ಬಂದಿದ್ದರು.  ಕೊಳದ ಬಳಿ ಬಂದಾಗ ಪ್ರಶಾಂತ್ ಹಾಗೂ ಜೀವನ್ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಜೀವನ್ ಪ್ರಯತ್ನಿಸಿದಾಗ ಜೀವಭಯದಲ್ಲಿದ್ದ ಪ್ರಶಾಂತ್ ಆತನ ಕೈ ಹಿಡಿದೆಳೆದಿದ್ದಾನೆ.
 
ಇಬ್ಬರಿಗೂ ಈಜು ಬರದ ಕಾರಣ ಜಲಸಮಾಧಿಯಾಗಿದ್ದಾರೆ.
 
ಶವಗಳನ್ನು ಮೇಲೆತ್ತಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಿಜೆಪಿ ಕಾರ್ಯಕರ್ತನ ಹತ್ಯೆ; ಗೃಹಪ್ರವೇಶದ ಮುನ್ನಾದಿನ ಸ್ಮಶಾನ ಸೇರಿದ