Select Your Language

Notifications

webdunia
webdunia
webdunia
webdunia

ಮತ್ತೆ ಬಿಜೆಪಿ ಕಾರ್ಯಕರ್ತನ ಹತ್ಯೆ; ಗೃಹಪ್ರವೇಶದ ಮುನ್ನಾದಿನ ಸ್ಮಶಾನ ಸೇರಿದ

ಬಿಜೆಪಿ ಕಾರ್ಯಕರ್ತ
ಬೆಂಗಳೂರು , ಬುಧವಾರ, 9 ನವೆಂಬರ್ 2016 (09:08 IST)
ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಹತ್ಯೆ ಸರಣಿ ಮುಂದುವರೆದಿದ್ದು ನಿನ್ನೆ ಮಾಗಡಿ ರಸ್ತೆ ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ.
 
ಮೃತನನ್ನು  ಹೆಗ್ಗನಹಳ್ಳಿ ನಿವಾಸಿ ಚಿಕ್ಕತಿಮ್ಮೇಗೌಡ (28)ಎಂದು ಗುರುತಿಸಲಾಗಿದ್ದು ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಮಾರಕಾಸ್ತ್ರಗಳಿಂದ ಕುತ್ತಿಗೆಗೆ ಇರಿದು ಕೊಂದು ಪರಾರಿಯಾಗಿದ್ದಾರೆ. 
 
ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ತಿಮ್ಮೇಗೌಡ ಇತ್ತೀಚಿಗೆ ಬಿಜೆಪಿ ಸೇರಿದ್ದರು. 
 
ಹೊಸದಾಗಿ ಮನೆ ಕಟ್ಟಿಸಿದ್ದ ಅವರು ಇಂದು ಗೃಹಪ್ರವೇಶ ಮಾಡುವವರಿದ್ದರು. ಆದರೆ ಅಷ್ಟರಲ್ಲಿ ಅವರ ಹತ್ಯೆಯಾಗಿದೆ.
 
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ್ಬನ್ಸ್ ಕಾಡಲ್ಲಿ ಹೆಚ್ಚಾಯ್ತು ಹುಲಿ ಸಂತತಿ!