Select Your Language

Notifications

webdunia
webdunia
webdunia
webdunia

ಗುದದ್ವಾರದಲ್ಲಿ ಚಿನ್ನ ಇಟ್ಟು ಕಳ್ಳ ಸಾಗಣೆ: ಇಬ್ಬರ ಬಂಧನ

ಗುದದ್ವಾರದಲ್ಲಿ ಚಿನ್ನ ಇಟ್ಟು ಕಳ್ಳ ಸಾಗಣೆ: ಇಬ್ಬರ ಬಂಧನ
ಮಂಗಳೂರು , ಗುರುವಾರ, 8 ಜೂನ್ 2017 (11:18 IST)
ಮಂಗಳೂರು : ಗುದದ್ವಾರದಲ್ಲಿ ಚಿನ್ನವನ್ನು ಇರಿಸಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಚಾಲಾಕಿಗಳಿಬ್ಬರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಬಲೆಗೆ ಬಿದ್ದಿದ್ದಾರೆ.
 
ದುಬೈನಿಂದ ಅಕ್ರಮವಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಅಪರಾಧಿಗಳಾದ ದೀಪಕ್‌ ಇಂದರ್‌ದಾಸ್‌ ಸಿದ್ವಾನಿ ಮತ್ತು ನಿರ್ಮಲ್‌ ದಾಸ್‌  ಬಂಧಿತರಾಗಿದ್ದಾರೆ. ಅನುಮಾನಗೊಂಡು ಇನ್ನಷ್ಟು ತಪಾಸಣೆಗೊಳಪಡಿಸಿದಾಗ ಗುದದ್ವಾರದಲ್ಲಿ ಚಿನ್ನ ಅಡಗಿಸಿಕೊಂಡಿರುವುದು ಪತ್ತೆಯಾಗಿದೆ. ಇಬ್ಬರ ಗುದದ್ವಾರಗಳಲ್ಲಿ 1 ಕೆ.ಜಿ.240 ಗ್ರಾಂಗಳಷ್ಟಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದು ಇಬ್ಬರನ್ನೂ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
 
ಈ ಇಬ್ಬರು ಕಳ್ಳರು ದುಬೈನಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುವುದರಿಂದ ಅದನ್ನು ಪಡೆದು ಕಾಂಡೋಮ್‌ಗಳಲ್ಲಿ ತುಂಬಿ ಗುದದ್ವಾರದೊಳಗೆ ಚಿನ್ನವನ್ನು ತುರುಕಿಸಿಕೊಂಡಿದ್ದರು. ಅದನ್ನು ಇಲ್ಲಿ ದುಪ್ಪಟ್ಟು ಬೆಲೆಗೆ ಮಾರಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

Share this Story:

Follow Webdunia kannada

ಮುಂದಿನ ಸುದ್ದಿ

ಹಸಿವಾಯಿತೆಂದು ಈ ಮೇಕೆ ಮಾಲಿಕನ ನೋಟಿನ ಕಂತೆಯನ್ನೇ ಗುಳುಂ ಮಾಡಿತು!