Select Your Language

Notifications

webdunia
webdunia
webdunia
webdunia

ರಾಜ್ಯದ 61 ತಾಲೂಕು ಪ್ರವಾಹ ಪೀಡಿತ ತಾಲೂಕು: ರಾಜ್ಯ ಸರಕಾರ ಘೋಷಣೆ

karnataka
bengaluru , ಬುಧವಾರ, 11 ಆಗಸ್ಟ್ 2021 (21:44 IST)

ಕಂದಾಯ ಇಲಾಖೆ ಮಂಗಳವಾರ 61 ತಾಲೂಕುಗಳು ಪ್ರವಾಹ ಪೀಡಿತ ಅಂತ ಘೋಷಣೆ ಮಾಡಲಾಗಿದ್ದು, ಎನ್ ಡಿಆರ್ ಎಫ್ ಮತ್ತು ಎಸ್ ಟಿಆರ್ ಎಫ್ ಮಾರ್ಗಚೂಸಿ ಅನ್ವಯ ಪರಿಹಾರ ಕಾರ್ಯ ನಡೆಯಲಿದೆ ಎಂದು ತಿಳಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಅತಿಯಾದ ಮಳೆಯಾಗಿದ್ದರಿಂದ ಕೃಷ್ಣ ಜಲಾಶಯ ತುಂಬಿ ಹರಿದಿತ್ತು. ಇದರಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಅಲ್ಲದೇ ಕರಾವಳಿ ಮತ್ತು ಮಲೆನಾಡು ಜಿಲ್ಲೆಯಲ್ಲೂ ಪ್ರವಾಹ ಉಂಟಾಗಿತ್ತು. ಇದರಿಂದ ಜೀವಹಾನಿ, ಆಸ್ತಿ‌, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳು ಹಾನಿಯಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು, ಕಲಬುರಗಿ ‌ಮೈಸೂರು, ಬೆಳಗಾವಿ, ರಾಯಚೂರು ಸೇರಿದಂತೆ 61 ಜಿಲ್ಲೆಗಳ ತಾಲೂಕುಗಳನ್ನು ಪ್ರವಾಹ ಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋಲಾರ ಜಿಲ್ಲಿಯಲ್ಲಿ 3 ನೇ ಅಲೆ ಆತಂಕದ ಭೀತಿ