Publish Date: Wed, 02 Aug 2023 (20:06 IST)
Updated Date: Wed, 02 Aug 2023 (19:08 IST)
ನಿನ್ನೆ ಸರ್ಕಾರ 211 ಸಿವಿಲ್ ಇನ್ಸ್ಪೆಕ್ಟರ್ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇಂದು ಬೆಳ್ಳಂಬೆಳ್ಳಗೆ ಐವರು ಇನ್ಸ್ಪೆಕ್ಟರ್ಗಳಿಗೆ DGIGP ಕಚೇರಿಯಿಂದ ಆದೇಶವನ್ನ ತಡೆಹಿಡಿಯಲಾಗಿದೆ. ಸಂಸದ ಡಿ.ಕೆ.ಸುರೇಶ್ ಕೊಟ್ಟ ದೂರಿನ ಮೇರೆಗೆ ಬೆಂಗಳೂರು ಸೇರಿದಂತೆ ಒಟ್ಟು 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆಹಿಡಿಯಲಾಗಿದೆ. RR ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನ ತಡೆಹಿಡಿಯಲಾಗಿದೆ. ತಾವು ಕೊಟ್ಟ ಲಿಸ್ಟ್ನ್ನು ಗೃಹ ಇಲಾಖೆ ಪರಿಗಣನೆಗೆ ತೆಗೆದುಕೊಳ್ಳದೇ ವರ್ಗಾವಣೆ ಮಾಡಲಾಗಿದೆ ಎಂದು ರಣದೀಪ್ ಸುರ್ಜೇವಾಲಾಗೆ ಡಿ.ಕೆ.ಸುರೇಶ್ ದೂರು ನೀಡಿದ್ದರು. ನಿನ್ನೆ ರಾತ್ರಿ 211 ಸಿವಿಲ್ ಇನ್ಸ್ಪೆಕ್ಟರ್ಗಳನ್ನ ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ 11 ವರ್ಗಾವಣೆಗಳನ್ನ ತಡೆಹಿಡಿದಿದ್ದು, ಗೃಹಸಚಿವರಿಗೆ ಸುರ್ಜೇವಾಲಾ ಫೋನ್ ಮಾಡಿ ಆದೇಶ ತಡೆ ಹಿಡಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.