Webdunia - Bharat's app for daily news and videos

Install App

ಸಿಎಂ ಕುಮಾರಸ್ವಾಮಿ ಒಂದು ದಿನದ ಕೊಡಗು ಭೇಟಿಗೆ 100 ಮರಗಳು ಉರುಳಿತು!

Webdunia
ಶುಕ್ರವಾರ, 20 ಜುಲೈ 2018 (10:03 IST)
ಕೊಡಗು: ಸಿಎಂ ಕುಮಾರಸ್ವಾಮಿ ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ಇತ್ತು ಹಲವು ಸಭೆ, ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಆದರೆ ಸಿಎಂ ಒಂದು ದಿನದ ಭೇಟಿಯ ಬೆಲೆ ಎಷ್ಟು ಗೊತ್ತಾ?!

ಸಿಎಂ ಒಂದು ದಿನದ ಭೇಟಿಗಾಗಿ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಸುಮಾರು 100 ಮರಗಳನ್ನು ಕಡಿದು ಹಾಕಿದೆಯಂತೆ! ಎಲ್ಲವೂ ಸಿಎಂ ಸುರಕ್ಷತೆ ದೃಷ್ಟಿಯಿಂದ ಎಂದು ಇದಕ್ಕೆ ಸಮಜಾಯಿಷಿ ಕೊಡಲಾಗಿದೆ.

ಅಪಾಯಕಾರಿ ಮರಗಳನ್ನು ಕಡಿಯುವ ಮೊದಲು ನಮಗೆ ಯಾವುದೇ ಸೂಚನೆ ಕೊಟ್ಟಿಲ್ಲ. ನಾವು ಮಳೆ, ಗಾಳಿಯಿಂದ ಮರಗಳು ಬಿದ್ದಿರಬಹುದು ಎಂದು ಅಂದುಕೊಂಡಿದ್ದೆವು ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ.

ಆದರೆ ಇದಕ್ಕೆ ಸಮಜಾಯಿಷಿ ನೀಡಿರುವ ಜಿಲ್ಲಾಧಿಕಾರಿ ನಾವು ಅಪಾಯಕಾರಿ ಟೊಂಗೆಗಳನ್ನು ಕಡಿಯಲು ಸೂಚಿಸಿದ್ದೆವಷ್ಟೇ. ಆದರೆ ನಮ್ಮ ಆದೇಶವನ್ನು ತಪ್ಪಾಗಿ ಗ್ರಹಿಸಿ ಮರಗಳನ್ನು ಕತ್ತರಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಸ್ಪಷ್ಟನೆಗಳು ಏನೇ ಇದ್ದರೂ ರಾಜ್ಯದ ಮುಖ್ಯಮಂತ್ರಿ ಭೇಟಿ ನೆಪದಲ್ಲಿ ಹಸಿರಿಗೆ ಹೆಸರಾಗಿರುವ ಕೊಡಗಿನಲ್ಲಿ ಅದೆಷ್ಟೋ ಮರಗಳಿಗೆ ಕತ್ತರಿ ಹಾಕಿದ್ದು ಎಷ್ಟು ಸರಿ?

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments