ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ಸನ್ಮಾನ

Webdunia
ಶನಿವಾರ, 28 ಮೇ 2022 (20:12 IST)
students
ದುಗ್ಗಾವತಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್
 
ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕಾದರೆ ಶಿಕ್ಷಣವೆಂಬ ಹುಲಿಯ ಹಾಲನ್ನು ಕುಡಿಯಲೇಬೇಕು ಎಂಬ ಡಾ. ಬಿ. ಆರ್. ಅಂಬೇಡ್ಕರ್ ಅವರ ನುಡಿಯಂತೆ ದುಗ್ಗಾವತಿಯಲ್ಲಿ ಜೀವನದ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮುಗ್ದ ವಿದ್ಯಾರ್ಥಿಗಳಿಗೆ ಎಂ. ಪಿ. ವೀಣಾ ಮಹಾಂತೇಶ್ ಅವರು ಸನ್ಮಾನವನ್ನು ಮಾಡಿ ಅ ಮಕ್ಕಳಿಗೆ ಶುಭ ಹಾರೈಸಿದರು.
ಆಗೆಯೇ ಕನ್ನಡ ವಿಷಯದಲ್ಲಿ 125 ಕ್ಕೆ 121 ಕ್ಕೂ ಹೆಚ್ಚು ಅಂಕ ಗಳಿಸಿ" ಕನ್ನಡ ರತ್ನ ಪ್ರಶಸ್ತಿ"ಗೆ ಭಾಜನರಾದ ವಿದ್ಯಾರ್ಥಿಗಳನ್ನು ಕೂಡ ಕ್ಷೇತ್ರದ ದಣಿವಿಲ್ಲದ ಜನನಾಯಕಿ ಎಂ. ಪಿ. ವೀಣಕ್ಕಾ ಅವರು ಗೌರವ ಸನ್ಮಾನದಿಂದ ಶುಭಕೋರಿದರು.
ಶಿಕ್ಷಣ ಕೇವಲ ಬದುಕಲು ಅಲ್ಲ ಶಿಕ್ಷಣ ಗೆಲುವುದನ್ನು ಕಲಿಸುತ್ತದೆ.ಶಿಕ್ಷಣ ಸೋಲಿನೊಂದಿಗೆ ಸಮಾಜದ ಜನರ ನಡುವೆ ಬದುಕುವುದನ್ನು ಕಲಿಸುತ್ತದೆ.ನಾವು ಪಡೆದ ಶಿಕ್ಷಣ ಕೇವಲ ಸಂಪಾದನೆಯ ಮಾರ್ಗವಾಗಿರದೆ ಸಮಾಜದ ಮಾರ್ಗದಲ್ಲಿಯೂ ನಡೆಯಬೇಕು ಶಿಕ್ಷಣ ಜೀವನಕ್ಕಾಗಿ ಜೀವನ ರಾಷ್ಟ್ರಕ್ಕಾಗಿ ಎಂಬ ನುಡಿಗಳನ್ನು ಎಂ. ಪಿ. ವೀಣಾ ಮಹಾಂತೇಶ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಅತೀ ಪ್ರಬಲ ಅಸ್ತ್ರವೆಂದರೆ ಅದುವೇ ಶಿಕ್ಷಣ ಎಂದು ತಿಳಿಸಿದರು. ಮುಂದಿನ ಎಲ್ಲ ವಿದ್ಯಾರ್ಥಿ ಗಳ ಜೀವನ ಸದಾ ಸಾಧನೆಯತ್ತ ಸಾಗಲಿ ಭವಿಷ್ಯದಲ್ಲಿ ಉತ್ತಮ ನಾಯಕರು ನೀವು ಆಗಬೇಕು ಎಂದು ಮನ ತುಂಬಿ ಹಾರೈಸಿದರು.
 
ಈ ಸಂದರ್ಭದಲ್ಲಿ  ದೀಪಾ, ಪೃಥ್ವಿ,ಯಶವಂತ್, ನಾಗರತ್ನ, S ನೇತ್ರಾವತಿ,R.G.ಗುರುರಾಜ್,A ಹಾಲೇಶ್, H. ಕಾದಂಬರಿ,M. K. ಅರ್ಚನಾ, K.ಜಯಶೀಲಾ ಈ ವಿದ್ಯಾರ್ಥಿ ಗಳನ್ನು ಸನ್ಮಾನಿಸಿದರು. 
 
ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ತಳವಾರ್ ಸಿದ್ದಮ್ಮ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಹಲವಾಗಲು ರೇಣುಕಮ್ಮ  ಸದಸ್ಯರುಗಳಾದ ಶ್ರೀಮತಿ ಅನ್ನಮ್ಮ ಶ್ರೀಮತಿ ಬಸಮ್ಮ ಸುರೇಶ್ 
ಮುಖಂಡರಾದ ಸುರೇಶ್ ಹರಣಿ ಕೊಟ್ರೇಶ್ ಎಸ್ಡಿಎಂಸಿ ಉಪಾಧ್ಯಕ್ಷರು ಚಮನ್ ಶರೀಫ್ ಗೋಣೆಪ್ಪ ಮಹೇಶ್ ಗೋಣಿವರ ಚಂದ್ರಪ್ಪ ಹಲುವಾಗಲು ಮಲ್ಲಿಕಾರ್ಜುನಪ್ಪ ಮತ್ತು ಗ್ರಾಮದ ಮಹಿಳೆಯರು,ಮುಖಂಡರು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೊಂದು ವರ್ಷ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗಿಲ್ಲ ದಕ ಜಿಲ್ಲೆಗೆ ಎಂಟ್ರಿ

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅವಿತು ಕಾಬೂಲ್‌ನಿಂದ ದೆಹಲಿಗೆ ಬಂದ ಬಾಲಕ

ವಿಧ್ಯುಕ್ತವಾಗಿ ದಸರಾಗೆ ಚಾಲನೆ ಸಿಕ್ಕ ಮರುದಿನವೇ ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ, ಏನಾಯಿತು ಗೊತ್ತಾ

ನಮ್ಮ ಹಿಂದೂ ಹಬ್ಬಗಳು ತೊಂದರೆ ಎದುರಿಸುತ್ತಿರುವುದನ್ನು ಗಮನಿಸಿದ್ದೇನೆ: ದೆಹಲಿ ಸಿಎಂ

ಜಾತಿಗಣತಿ ಮಾಡುವ ಹಿಂದುಳಿದ ಆಯೋಗದ ರಿಮೋಟ್ ಕಂಟ್ರೋಲ್ ಎಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments