Select Your Language

Notifications

webdunia
webdunia
webdunia
webdunia

ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ; ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲು

ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ; ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲು
ಹಾಸನ , ಗುರುವಾರ, 28 ಮೇ 2020 (10:03 IST)
ಹಾಸನ: ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.


ಹಾಸನದ ಕೆಎಸ್ ಆರ್ ಪಿ 11ನೇ ಬೆಟಾಲಿಯನ್ ನ ಕಮಾಂಡೆಂಟ್ ವಿರುದ್ಧ  ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮಾರ್ಚ್ ನಲ್ಲಿ ಲೆಕ್ಕಪರಿಶೋಧನೆ ವೇಳೆ ಅಕ್ರಮ ಬಯಲಾಗಿದ್ದು, ಬಡ ಪೊಲೀಸ್ ಸಿಬ್ಬಂದಿಯ ಪಿಎಫ್, ಜಿಪಿಎಫ್, ಎಲ್ ಐಸಿ ಹಣ ಸಂದಾಯ ಮಾಡದೆ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ.


ಅಕ್ರಮ ಬಯಲಾದ ಹಿನ್ನಲೆಯಲ್ಲಿ ಜೆ.ಆರ್. ಸುಮಾ ದೂರು ಆಧರಿಸಿ 7 ಜನರ ವಿರುದ್ಧ ಬೆಂಗಳೂರಿನ ಆಡಳಿತ ಕಚೇರಿ ಸಹಾಯಕ ಆಡಳಿತಾಧಿಕಾರಿ ಕೇಸ್ ದಾಖಲಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಸ್ ಆರ್ ಟಿಸಿ ಅಧಿಕಾರಿಗಳ ವಿರುದ್ಧ ಚಾಲಕರು ಆಕ್ರೋಶಗೊಂಡಿದ್ದೇಕೆ?