Select Your Language

Notifications

webdunia
webdunia
webdunia
webdunia

ಸುರೇಶ್​​​​​​​​​ ಸ್ಪರ್ಧೆ ಖಚಿತವಾಗಿಲ್ಲ-ಡಿಕೆಶಿ

ಸುರೇಶ್​​​​​​​​​ ಸ್ಪರ್ಧೆ ಖಚಿತವಾಗಿಲ್ಲ-ಡಿಕೆಶಿ
ರಾಮನಗರ , ಮಂಗಳವಾರ, 14 ಮಾರ್ಚ್ 2023 (16:11 IST)
ರಾಮನಗರ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಮಾತಿದೆ. ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಈ ಭಾರಿ ತಮ್ಮ ಪುತ್ರ ನಿಖಿಲ್ ​ ಕುಮಾರಸ್ವಾಮಿಯನ್ನು ಈ ಕ್ಷೇತ್ರದ JDS ಅಭ್ಯರ್ಥಿಯಾಗಿ ನಿಲ್ಲಿಸಲು ತಯಾರಿ ನಡೆಸಿದ್ದಾರಂತೆ. ಈ ಹಿನ್ನೆಲೆಯಲ್ಲಿ JDSಗೆ ಠಕ್ಕರ್​​ ಕೊಡಲು ಕಾಂಗ್ರೆಸ್ ಸಜ್ಜಾಗಿದ್ದು, ಒಕ್ಕಲಿಗ JDS ನಾಯಕನ ಪ್ರತಿ ಸ್ಪರ್ಥಿಯಾಗಿ ಒಕ್ಕಲಿಗ ಕೈ ನಾಯಕ D.Kಸುರೇಶ್​​​ಗೆ ಟಿಕೆಟ್​ ನೀಡಲು ತಯಾರಿ ನಡೆಸಿದ್ದಾರೆ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿತ್ತು.. ಸಂಸದ D.K. ಸುರೇಶ್​​ ರಾಮನಗರದಿಂದ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ಸ್ವತಃ KPCC ಅಧ್ಯಕ್ಷ D.K. ಶಿವಕುಮಾರ್​​​​​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಈ ರೀತಿಯ ಪ್ರಪೋಸಲ್ ಇದೆ, ಇದನ್ನು ತಳ್ಳಿ ಹಾಕಲ್ಲ. ಕೂತು ಮಾತನಾಡಬೇಕು ಎಂಬ ಸಂದೇಶ ನನಗಿದೆ. ಹೈ ಕಮಾಂಡ್​​ನಿಂದ ಸಂದೇಶ ಬಂದಿದ್ದು ನಿಜ ಎಂದು ಡಿಕೆಶಿ ಹೇಳಿದ್ದಾರೆ. ಹಿಂದೆ ಈ ವಿಚಾರ ಚರ್ಚೆ ಆಗಿತ್ತು.. ಕಾರ್ಯಕರ್ತರು ರಾಮನಗರದಿಂದ D.K ಸುರೇಶ್​ ಸ್ವರ್ಧೆಗೆ ಒತ್ತಾಯಿಸಿದ್ರು. ಆದರೆ ನಾವು ಅದರ ಬಗ್ಗೆ ತೀರ್ಮಾನ ಮಾಡಿರಲಿಲ್ಲ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅಂಜನಾದ್ರಿ ಬೆಟ್ಟದಲ್ಲಿ ಸಿಎಂ ಭೂಮಿ ಪೂಜೆ