Select Your Language

Notifications

webdunia
webdunia
webdunia
webdunia

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಗ್ರಾನೈಟ್ ದಾಳಿ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಗ್ರಾನೈಟ್ ದಾಳಿ
bangalore , ಭಾನುವಾರ, 6 ಮಾರ್ಚ್ 2022 (20:42 IST)
ಇಲ್ಲಿಯ ಹರಿ ಸಿಂಗ್‌ ಹೈ ಸ್ಟ್ರೀಟ್‌ನ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ ಭಯೋತ್ಪಾದಕರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದು ಒಬ್ಬರು ಪೊಲೀಸ್‌ ಸೇರಿ ಕನಿಷ್ಠ 20 ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹರಿ ಸಿಂಗ್‌ ಹೈ ಸ್ಟ್ರೀಟ್‌ ಪ್ರದೇಶದಲ್ಲಿ ಪಹರೆಯಲ್ಲಿದ್ದ ಪೊಲೀಸ್‌ ಮತ್ತು ಭದ್ರತಾ ಪಡೆಗಳ ಮೇಲೆ ಸಂಜೆ ಸುಮಾರು 4.20ಕ್ಕೆ ಭಯೋತ್ಪಾದಕರು ಗ್ರೆನೇಡ್‌ವೊಂದನ್ನು ಎಸೆದಿದ್ದಾರೆ. ಈ ವೇಳೆ ಮಾರುಕಟ್ಟೆ ಪ್ರದೇಶ ವಾರಾಂತ್ಯದ ಜನಸಂದಣಿಯಿಂದ ಕೂಡಿತ್ತು' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.
 
ಗ್ರೆನೇಡ್‌ ಸ್ಫೋಟದಲ್ಲಿ ಶ್ರೀನಗರದ ಮೊಹಮ್ಮದ್ ಅಸ್ಲಾಮ್ ಮಖ್ದೂಮಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
 
ಗಾಯಗೊಂಡವರನ್ನು ಇಲ್ಲಿಯ ಶ್ರೀ ಮಹಾರಾಜ ಹರಿ ಸಿಂಗ್‌ (ಎಸ್‌ಎಂಎಚ್‌ಎಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. 'ಭಯೋತ್ಪಾದಕರು ಗ್ರೆನೇಡ್‌ ದಾಳಿ ನಡೆಸಿದಾಗ ಮಾರುಕಟ್ಟೆಯಲ್ಲಿ ಭಾರಿ ಜನದಟ್ಟಣೆಯಿತ್ತು' ಎಂದು ಹಿರಿಯ ಪೊಲೀಸ್‌ ಅಧಿಕಾರಿ ರಾಕೇಶ್‌ ಬಲ್ವಾಲ್‌ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿಂತಲ್ಲೇ ಬರುತ್ತೇ ಪಂಚರ್ ಅಂಗಡಿ..!