Publish Date: Tue, 12 Dec 2023 (15:00 IST)
Updated Date: Tue, 12 Dec 2023 (15:55 IST)
ಅಮಿತಾ ಜಿಂದಾಲ್ ಎಂಬ ಮಹಿಳೆಗೆ ನಟ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣದಲ್ಲಿ, ನಟ ದರ್ಶನ್ ಗೆ ಕ್ಲಿನ್ ಚಿಟ್ ಕೊಡಲು ಪೊಲೀಸರು ಉದ್ದೇಶಿಸಿದ್ದಾರೆ. ದೂರು ದಾಖಲಿಸಿಕೊಂಡಿದ್ದ ಆರ್. ಆರ್.ನಗರ ಪೊಲೀಸರು ದರ್ಶನ್ ರನ್ನು ವಿಚಾರಣೆ ಮಾಡಿದ್ದರು.
ಈ ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.ಘಟನೆ ನಡೆದಾಗ ನಟ ದರ್ಶನ್ ಸ್ಥಳದಲ್ಲೇ ಇರಲಿಲ್ಲ. ದರ್ಶನ್ಗೆ ಘಟನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಎಫ್ ಐಆರ್ ನಿಂದ ದರ್ಶನ್ ತೂಗುದೀಪ ಹೆಸರನ್ನು ಕೈ ಬಿಡಲು ಪೊಲೀಸರು ಉದ್ದೇಶಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ತಮ್ಮ ಮೇಲೆ ನಾಯಿಯನ್ನು ಛೂ ಬಿಡಲಾಗಿತ್ತು ಎಂದು ಅಮಿತಾ ಜಿಂದಾಲ್ ಎಂದು ಆರೋಪಿಸಿದ್ದರು.