Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆದಿತ್ತಾ? ದಿಡೀರ್ ಸುದ್ದಿಗೋಷ್ಟಿ ಕರೆದು ಯಶ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆದಿತ್ತಾ? ದಿಡೀರ್ ಸುದ್ದಿಗೋಷ್ಟಿ ಕರೆದು ಯಶ್ ಹೇಳಿದ್ದೇನು?
ಬೆಂಗಳೂರು , ಭಾನುವಾರ, 10 ಮಾರ್ಚ್ 2019 (11:47 IST)
ಬೆಂಗಳೂರು: ಇತ್ತೀಚೆಗಷ್ಟೇ ಬಂಧಿತನಾದ ರೌಡಿ ಶೀಟರ್ ಸ್ಯಾಂಡಲ್ ವುಡ್ ಸ್ಟಾರ್ ಒಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದ ಎಂಬ ಸುದ್ದಿ ಬಂದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಹೆಸರು ಕೇಳಿಬಂದಿತ್ತು.


ರೌಡಿ ಶೀಟರ್ ಸುಪಾರಿ ಪಡೆದಿದ್ದು ಯಶ್ ಹತ್ಯೆಗೆ ಎಂದು ಸುದ್ದಿ ಹಬ್ಬಿತ್ತು. ಇಂತಹ ಸುದ್ದಿ ಬಂದ ಬೆನ್ನಲ್ಲೇ ಆತಂಕಕ್ಕೊಳಗಾದ ಯಶ್ ತಕ್ಷಣವೇ ಗೃಹಸಚಿವರು ಮತ್ತು ಪೊಲೀಸರೊಂದಿಗೆ ಮಾತನಾಡಿದ್ದು, ಆ ನಟ ತಾನಲ್ಲವೆಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.

ಇದಾದ ಬಳಿಕ ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ಯಶ್ ‘ನಾನೇನು ಕುರಿನಾ, ಕೋಳಿನಾ.. ಹಾಗೆಲ್ಲಾ ಯಾರೋ ಬಂದು ನನ್ನ ಸಾಯಿಸಿಬಿಡಕ್ಕಾಗಲ್ಲ. ಈ ಪ್ರಕರಣದಲ್ಲಿ ಬಂದ ನಟ ನಾನಲ್ಲ. ಸುಮ್ಮನೇ ನನ್ನ ಹೆಸರು ಈ ಪ್ರಕರಣದಲ್ಲಿ ಎಳೆದುತರಬೇಡಿ. ನಮ್ಮ ಇಂಡಸ್ಟ್ರಿಯಲ್ಲಿ ನನ್ನ ಹತ್ಯೆಗೆ ಸುಪಾರಿ ನೀಡುವಷ್ಟು ಕೆಟ್ಟವರು ಯಾರೂ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ಗೆ ನನ್ನ ಪಕ್ಷದ ಬೆಂಬಲ ಇಲ್ಲ ಎಂದ ರಿಯಲ್ ಸ್ಟಾರ್ ಉಪೇಂದ್ರ