Select Your Language

Notifications

webdunia
webdunia
webdunia
webdunia

ಯೋಗರಾಜ ಭಟ್ಟರು ಗಾಳಿಪಟ ಹಾರಿಬಿಟ್ಟ ಸೂಚನೆ ಕೊಟ್ಟಿದ್ದು ಹೀಗೆ!

ಯೋಗರಾಜ ಭಟ್ಟರು ಗಾಳಿಪಟ ಹಾರಿಬಿಟ್ಟ ಸೂಚನೆ ಕೊಟ್ಟಿದ್ದು ಹೀಗೆ!
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (09:12 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಯಶಸ್ವೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗಾಳಿಪಟ2. ಈ ಸಿನಿಮಾದ ಚಿತ್ರೀಕರಣ ಈಗ ಪ್ರಾರಂಭವಾಗಿದೆ.


ಮುಂಗಾರು ಮಳೆ ಬಳಿಕ ಈ ಇಬ್ಬರೂ ಜತೆಯಾಗಿ ಮಾಡಿ ಹಿಟ್ ಆದ ಸಿನಿಮಾ ಗಾಳಿಪಟ. ಅದರ ಎರಡನೇ ಭಾಗ ಈಗ ಮತ್ತೆ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಚಿತ್ರದ ಲೊಕೇಷನ್ ಗೆ ತೊಂದರೆಯಾಗಿ ಚಿತ್ರೀಕರಣ ಕೊಂಚ ತಡವಾಗಿತ್ತು.

ಈಗ ಕೊನೆಗೂ ಭಟ್ಟರು ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದನ್ನು ತಮ್ಮದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಸ್ಕ್ರಾಪ್ ಬುಕ್ ಹಾಳೆಯಲ್ಲಿ ಅಪ್ಪನಿಗೆ ತಪ್ಪು ತಪ್ಪಾಗಿ ಪತ್ರ ಬರೆದಂತೆ ತಮ್ಮ ಸಿನಿಮಾ ಶುರುವಾದ ಸೂಚನೆಯನ್ನು ಭಟ್ಟರು ನೀಡಿದ್ದಾರೆ. ಮುಂದಿನ ವರ್ಷಕ್ಕೆ ಚಿತ್ರ ಬಿಡುಗಡೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ ಡೈಲಾಗ್ ಬರೆದುಕೊಟ್ಟ ಸಲ್ಮಾನ್ ಖಾನ್