Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರದಲ್ಲಿ ಶಕುನಿ ಆಗ್ತಾರಾ? ಈ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ

ಕುರುಕ್ಷೇತ್ರದಲ್ಲಿ ಶಕುನಿ ಆಗ್ತಾರಾ? ಈ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ
Bangalore , ಗುರುವಾರ, 11 ಮೇ 2017 (10:49 IST)
ಬೆಂಗಳೂರು: ಬಿಗ್ ಬಜೆಟ್ ನ ಚಿತ್ರ ಕುರುಕ್ಷೇತ್ರ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದರ ಪಾತ್ರವರ್ಗದ್ದೇ ಸುದ್ದಿ. ಯಾರೆಲ್ಲಾ ಇರುತ್ತಾರೆ ಈ ಚಿತ್ರದಲ್ಲಿ ಎಂಬುದೇ ಅಭಿಮಾನಿಗಳ ಸುದ್ದಿ.

 
ದಕ್ಷಿಣ ಭಾರತದ ದಿಗ್ಗಜ ನಟರೆಲ್ಲಾ ಈ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿದೆ. ಪ್ರಿಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ದರ್ಶನ್ ದುರ್ಯೋಧನನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಮಾಡಿಸಿ ಬಂದಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಧರ್ಮರಾಯನ ಪಾತ್ರವನ್ನು ರವಿಚಂದ್ರನ್ ಅವರನ್ನು ಕರೆತರಲಾಗುತ್ತದೆ ಎಂದು ಸುದ್ದಿ ಹಬ್ಬಿದೆ. ಇದರ ನಡುವೆ ಶಕುನಿ ಪಾತ್ರವನ್ನು ನವರಸ ನಾಯಕ ಜಗ್ಗೇಶ್ ಮಾಡುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಅನೇಕ ಹಿರಿಯ ಕಲಾವಿದರಿದ್ದಾರೆ. ಕಲೆಯನ್ನೇ ನಂಬಿದ್ದಾರೆ. ಅವರನ್ನು ಬಳಸಿಕೊಳ್ಳಿ ಎನ್ನುವ ಮೂಲಕ ಜಗ್ಗೇಶ್ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಗೆ ಜಗ್ಗೇಶ್ ಕುರುಕ್ಷೇತ್ರದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ