Webdunia - Bharat's app for daily news and videos

Install App

ದರ್ಶನ್ ಇನ್ನು ಶೂಟಿಂಗ್ ನಲ್ಲಿ ಭಾಗಿಯಾಗಬಹುದಾ

Krishnaveni K
ಬುಧವಾರ, 18 ಡಿಸೆಂಬರ್ 2024 (09:25 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಮುಂದೆ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಿಗಿದೆ.

ನಟ ದರ್ಶನ್ ಈ ಮೊದಲು ಬೆನ್ನು ನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಆಗ ಅವರಿಗೆ ಚಿಕಿತ್ಸೆಗೆ ಮಾತ್ರ ಅವಕಾಶವಿತ್ತು. ಆದರೆ ಈಗ ರೆಗ್ಯುಲರ್ ಜಾಮೀನು ಸಿಕ್ಕಿದ್ದು ಒಂದು ರೀತಿಯಲ್ಲಿ ಅವರು ಫ್ರೀ ಬರ್ಡ್ ಆಗಿದ್ದಾರೆ.

ಆದರೆ ದರ್ಶನ್ ಗೆ ಬೇಕಾಬಿಟ್ಟಿ ಇರುವಂತಿಲ್ಲ. ಯಾಕೆಂದರೆ ಅವರ ಮೇಲೆ ಪೊಲೀಸರ ಕಣ್ಣು ಇದ್ದೇ ಇರುತ್ತದೆ. ಬೆನ್ನು ನೋವಿನ ನೆಪ ಹೇಳಿ ಜಾಮೀನು ಪಡೆದಿರುವ ದರ್ಶನ್ ಗೆ ಈಗ ರೆಗ್ಯುಲರ್ ಜಾಮೀನು ಸಿಕ್ಕರೂ ಅದರ ವಿರುದ್ಧ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಹೊರಟಿದ್ದಾರೆ.

ಸದ್ಯಕ್ಕೆ ಅವರು ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ದರ್ಶನ್ ಸದ್ಯಕ್ಕಂತೂ ತಮ್ಮ ಬೆನ್ನು ನೋವಿನ ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಕೋರ್ಟ್ ನಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಇದರ ನಡುವೆ ಆಗಾಗ ಕೋರ್ಟ್ ಕರೆಯುವಾಗ ವಿಚಾರಣೆಗೆಂದು ಹಾಜರಾಗಬೇಕಾಗುತ್ತದೆ. ಆದರೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯುವುದಕ್ಕೆ ಸಮಸ್ಯೆಯಿಲ್ಲ. ಸದ್ಯಕ್ಕೆ ದರ್ಶನ್ ನಂಬಿಕೊಂಡು ಹಲವು ನಿರ್ಮಾಪಕರಿದ್ದಾರೆ. ಅವರ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧದಲ್ಲಿದೆ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಬಾಕಿಯಿದೆ. ತರುಣ್ ಸುಧೀರ್ ಕೂಡಾ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಆದರೆ ಇದೆಲ್ಲವೂ ಸದ್ಯಕ್ಕಂತೂ ಆಗುವುದು ಡೌಟ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸೌಂದರ್ಯ ಶೆಟ್ಟಿ, ಇದು ಆಸೀಯಾ ಕಣ್ಣೀರಿನ ಶಾಪ ಎಂದು ಭಾರೀ ಟ್ರೋಲ್‌

ಇರುಮುಡಿ ಸಕ್ಸಸ್ ಬಳಿಕ ನಟ ರವಿತೇಜ ಹಾವಭಾವವೇ ಬದಲಾಯ್ತು.. ಏನು ಓವರ್ ಆಕ್ಟಿಂಗ್ ಎಂದ ನೆಟ್ಟಿಗರು Video

ಮಹಿಳೆಯರ ನೆಚ್ಚಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ರಿಯಾಲಿಟಿ ಶೋ ಮತ್ತೆ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

BBK13: ಒಂದೇ ಗುಂಪು ಎಂಬಂತಿದ್ದ ಕಾವ್ಯಾ, ಗಗನ್ ನಡುವೆಯೇ ನಡೆಯಿತು ಕಿತ್ತಾಟ Video

Video: ಕಮಲಿ ಸೀರಿಯಲ್ ನಲ್ಲಿ ನಿಜವಾಗಿಯೂ ನಿರಂಜನ್ ನನಗೆ ಮೂರು ಗಂಟು ಕಟ್ಟಿದ್ರು: ಅಮೂಲ್ಯ ಗೌಡ

ಮುಂದಿನ ಸುದ್ದಿ
Show comments