Webdunia - Bharat's app for daily news and videos

Install App

ಶಿವರಾಜ್ ಕುಮಾರ್ ನನ್ನ ಹಿಂದಿನ ಜನ್ಮದ ಸಹೋದರ ಎಂದು ನಟ ಜಗ್ಗೇಶ್ ಹೇಳಿದ್ದು ಯಾಕೆ?

Webdunia
ಶನಿವಾರ, 14 ಜುಲೈ 2018 (06:48 IST)
ಬೆಂಗಳೂರು : ಕನ್ನಡದ ಖ್ಯಾತ ನಟರೊಬ್ಬರು ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ನನ್ನ ಹಿಂದಿನ ಜನ್ಮದ ಸಹೋದರ ಎಂದು  ಹೇಳಿದ್ದಾರೆ.


ಹೀಗೆ ಹೇಳಿದ್ದು ಬೇರೆ ಯಾರು ಅಲ್ಲ. ನವರಸನಾಯಕ ಜಗ್ಗೇಶ್ ಅವರು. ಅವರು ಈ ರೀತಿ ಹೇಳಿರುವುದಕ್ಕೆ ಕಾರಣವಿಷ್ಟೇ. ಅದೇನೆಂದರೆ ನಟ ಶಿವರಾಜ್ ಕುಮಾರ್ ಅವರು ಜುಲೈ 12ರಂದು ತಮ್ಮ  ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ಅವರು ಅಭಿನಯಿಸಲಿರೋ ಹಲವು ಸಿನಿಮಾಗಳ ಪೋಸ್ಟರ್ ಗಳನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು. ಇವುಗಳಲ್ಲಿ ರುಸ್ತುಂ ಹಾಗೂ ಧ್ರೋಣ ಕೂಡ ಒಂದು.

ಆದರೆ ರುಸ್ತುಂ ಹಾಗೂ ಧ್ರೋಣ ಟೈಟಲ್ ಇರುವ ಸಿನಿಮಾಗಳು ಈ ಹಿಂದೆಯೇ ರಿಲೀಸ್ ಆಗಿತ್ತು. ಈ ಎರಡು ಟೈಟಲ್ ನ ಸಿನಿಮಾಗಳಿಗೂ ನವರಸನಾಯಕ ಜಗ್ಗೇಶ್ ಅವರೇ ಹೀರೋ ಆಗಿದ್ದರು. ಈ ಬಗ್ಗೆ ಅಭಿಮಾನಿಯೊಬ್ಬ ಜಗ್ಗೇಶ್ ಅವರಿಗೆ ,’ಜಗ್ಗೇಶ್ ಸಾರ್ , ನಾನು ನಿಮ್ಮ ಅಭಿಮಾನಿ , ನಿಮ್ಮ ಚಿತ್ರಗಳಾದ ರುಸ್ತುಂ , ದ್ರೋಣ , ಈ ಚಿತ್ರದ ಹೆಸರುಗಳು ಶಿವರಾಜ್ ಕುಮಾರ್ ರವರ ಹೊಸ ಚಿತ್ರಗಳ ಹೆಸರಾಗಿವೆ , ಇದಕ್ಕೆ ನೀವೇನಂತಿರಾ ..? ಅಂತ ಕೇಳಿದ್ದಾರೆ.


ಇದಕ್ಕೆ ಜಗ್ಗೇಶ್ ಅವರು ‘ಇದಕ್ಕಿಂತ ಆನಂದ ಬೇರೇನಿದೆ .. ಶಿವ ನನ್ನ ಹಿಂದಿನ ಜನ್ಮದ ಸಹೋದರನಂತೆ , ಅವರ ತಂದೆ ನನ್ನ ಬದುಕಿಗೆ ದ್ರೋಣಾಚಾರ್ಯರಂತೆ .. ಅವರ ವಂಶದ ಎಲ್ಲಾ ಕಾರ್ಯಕ್ಕೂ ನನ್ನ ಹೃದಯದಿಂದ ಶುಭ ಹಾರೈಸುವೆ .. ನೂರ್ಕಾಲ ಸುಖವಾಗಿ ಬಾಳಲಿ ರಾಜವಂಶ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments