Webdunia - Bharat's app for daily news and videos

Install App

ಹುಚ್ಚ 2 ಚಿತ್ರ ಇಷ್ಟು ತಡವಾಗಲು ಕಾರಣ ಯಾರು…?

Webdunia
ಗುರುವಾರ, 5 ಏಪ್ರಿಲ್ 2018 (07:52 IST)
ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದರಂಗಿ ಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಹುಚ್ಚ-2‘ ಚಿತ್ರ  ಇನ್ನೇನು ಬಿಡುಗಡೆಯಾಗಲಿದೆ. ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು.ಆದರೆ ಅದು ತೀರಾ ತಡವಾದ ಕಾರಣದಿಂದ ಈ ಚಿತ್ರ ನಿಂತು ಹೋಗಿದೆಯೆನೋ ಎಂಬ ಅನುಮಾನ ಕೂಡ ಜನರಲ್ಲಿ ಮೂಡಿತ್ತು.


ಆದರೆ ಇದೀಗ ಚಿತ್ರ ಇಷ್ಟು ಲೇಟಾಗಿ ಬಿಡುಗಡೆಯಾಗಲು ಯಾರು ಕಾರಣವೆಂಬುದು ತಿಳಿದುಬಂದಿದೆ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಚಿತ್ರದ ನಿರ್ದೇಶಕ  ಓಂಪ್ರಕಾಶ್ ರಾವ್ ಅವರು ಮಾತನಾಡಿ ಚಿತ್ರ ತಡವಾಗಲು ತಾವೇ ಕಾರಣ ಎಂಬುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು,’ ಯಾವುದೇ ಚಿತ್ರ ನಿರ್ದೇಶನ ಮಾಡೋದಕ್ಕಿಂತಲೂ ಮುನ್ನ ಆ ಚಿತ್ರದ ಟೈಟಲ್ಲು ಪ್ರೇಕ್ಷಕರಲ್ಲಿ ಯಾವ ರೀತಿಯ ನಿರೀಕ್ಷೆ ಹುಟ್ಟು ಹಾಕುತ್ತದೆಂಬುದನ್ನು ಅರಿಯಬೇಕು. ಆ ನಂತರದಲ್ಲಿ ಅದೆಲ್ಲವನ್ನು ನೀಗುವಂಥಾ ರೀತಿಯಲ್ಲಿ ಚಿತ್ರವನ್ನು ರೂಪಿಸಬೇಕು. ಈ ಥರದ ಮನಸ್ಥಿತಿ ಹೊಂದಿದ್ದರಿಂದಲೇ ಚಿತ್ರೀಕರಣಕ್ಕೆ ಹೋಗೋದೇ ಕೊಂಚ ತಡವಾಯ್ತು. ಅದಕ್ಕೆ ಕಾರಣ ನಾನೇ.


ಸ್ವಲ್ಪ ದಿನ ಮೈಂಡ್ ಫ್ರೆಷ್ ಮಾಡಿಕೊಂಡು ಮುಂದುವರೆಸೋಣ ಅಂತಾ ಸುಮ್ಮನಾಗಿದ್ವಿ. ನಮ್ಮ 'ಕಟ್ಟೆ' ಸಿನಿಮಾ ಫ್ಲಾಪ್ ಆಗಿತ್ತು. ಆ ಸಿನಿಮಾ ನಮ್ಮ ತಪ್ಪು ನಿರ್ಧಾರ ಅಂತಾ ಗೊತ್ತಾಗಿತ್ತು. ಹೀಗಾಗಿ ಲೇಟಾಯ್ತು. ಆದರೆ ಚೂರು ತಡವಾದರೂ ಅಂದುಕೊಂಡ ರೀತಿಯಲ್ಲೇ ಚಿತ್ರ ಮಾಡಿದ ಖುಷಿ ಇದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments