Publish Date: Sat, 03 Oct 2020 (21:01 IST)
Updated Date: Sat, 03 Oct 2020 (21:04 IST)
ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ನಲ್ಲಿ ವಿಚಾರಣೆಗೆ ಹಾಜರಾಗಿರುವ ಟಿವಿ ನಿರೂಪಕಿ ಅನುಶ್ರೀ ಪ್ರಮುಖ ರಾಜಕಾರಣಿಗಳ ಜೊತೆ ಮಾತನಾಡಿರುವ ವಿಷಯ ಚರ್ಚೆಯಾಗುತ್ತಿದೆ.
ಅನುಶ್ರೀ ಯಾವ ಮಾಜಿ ಸಿಎಂ ಹಾಗೂ ಅವರ ಪುತ್ರನ ಜೊತೆ ಮಾತನಾಡಿದ್ದಾರೆ ಎನ್ನೋದನ್ನು ಸರಕಾರ, ಮಾಧ್ಯಮಗಳು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿದ್ದಾರೆ.
ಮೂರು ಪಾರ್ಟಿಗಳ ನಾಯಕರ ಜೊತೆ ಅನುಶ್ರೀ ಮಾತನಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮಾಜಿ ಮುಖ್ಯಮಂತ್ರಿಗಳಲ್ಲಿ ಎಂ.ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತು ತಾವು ಸೇರಿದ್ದೇವೆ.
ಇದರಲ್ಲಿ ಯಾವ ಮಾಜಿ ಸಿಎಂ ಎನ್ನೋದನ್ನು ಮಾಧ್ಯಮಗಳು ಬಹಿರಂಗಪಡಿಸಬೇಕು. ಮಾಧ್ಯಮಗಳಿಗೆ ಸಿಸಿಬಿ ತನಿಖೆ ವಿಷಯ ಲೀಕ್ ಆಗಿದ್ದು ಹೇಗೆ? ಎಂಬುದರ ಕುರಿತು ತನಿಖೆ ಆಗಬೇಕೆಂದು ಒತ್ತಾಯ ಮಾಡಿದ್ದಾರೆ.