ಟಗರು ಸಿನಿಮಾ ಹಾಗೂ ಶಿವರಾಜ್ ಕುಮಾರ್ ಕುರಿತು ನಟ ಸುದೀಪ್ ಹೇಳಿದ್ದೇನು ಗೊತ್ತಾ…?

Webdunia
ಮಂಗಳವಾರ, 6 ಮಾರ್ಚ್ 2018 (09:00 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದ ಕುರಿತು ಸಾಕಷ್ಟು ಜನ ಮೆಚ್ಚುಗೆ ಮಾತನಾಡಿದ್ದಾರೆ. ಈಗ ನಟ ಸುದೀಪ್ ಕೂಡ ಈ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದ ಮೇಕಿಂಗ್ ತುಂಬಾ ಇಷ್ಟ ಆಯ್ತು. ಮೊದಲಿಗೆ ಸ್ವಲ್ಪ ಮಟ್ಟಿನ ಗೊಂದಲ ಅನಿಸುತ್ತೆ. ಹಲವಾರು ಪಾತ್ರಗಳು ಗಲಿಬಿಲಿಗೊಳಿಸುತ್ತವೆ. ಆದರೆ ಕತೆ ಮುಂದುವರಿದಂತೆ ನಿರ್ದೇಶಕರು ಎಲ್ಲಾ ಗೊಂದಲಗಳನ್ನು ಒಂದೊಂದಾಗಿ ನಿವಾರಿಸುತ್ತಾರೆ. ನಿರೂಪಣೆ ಅದ್ಭುತವಾಗಿದೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಒಂದು ಬಗೆಯಲ್ಲಿ ಕಥೆಯನ್ನು ನಿರೂಪಿಸಿರುವ ರೀತಿ ಇಷ್ಟವಾಗುತ್ತದೆ. ಸೂರಿ ಅವರಿಗೆ ಇಂತಹ ಚಿತ್ರಕಥೆ ಮತ್ತು ಪಾತ್ರಗಳನ್ನು ಹೆಣೆಯುವಲ್ಲಿ ಅವರಿಗೆ ಅವರೇ ಸಾಟಿ. ಪಾತ್ರಗಳಿಗೆ ಹೆಸರುಗಳನ್ನು ಕೊಡುವಲ್ಲೂ ಅವರು ವಿಶ್ವಕೋಶ ಇದ್ದಂತೆ. ಥಿಯೇಟರ್‌ನಿಂದ ಹೊರಬಂದ ಬಳಿಕವೂ ಚಿಟ್ಟೆ, ಕಾಕ್ರೋಚ್ ಮುಂತಾದ ಎಲ್ಲಾ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.


ಶಿವಣ್ಣನಿಗೆ ಆ ಎನರ್ಜಿ ಎಲ್ಲಿಂದ ಬರುತ್ತದೆ. ಧನಂಜಯ್ ಅವರ ಪಾತ್ರವೂ ಇಷ್ಟವಾಯಿತು. ವಸಿಷ್ಠ ಸಿಂಹ ಧ್ವನಿ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಒಂದು ಭಿನ್ನ ರೀತಿಯ ಚಿತ್ರ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ ಕಿಚ್ಚ ಸುದೀಪ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

ಮುಂದಿನ ಸುದ್ದಿ
Show comments