Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ಟಾಸ್ಕನ್ನು ಗೆಲ್ಲಲು ರಿಯಾಜ್ ಹೀಗ್ಯಾಕೆ ಮಾಡಿದ್ರು…?

Webdunia
ಶನಿವಾರ, 6 ಜನವರಿ 2018 (07:34 IST)
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಟಾಸ್ಕಗಳಿಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿತ್ತು. ಒಂದು ತಂಡಕ್ಕೆ ಕ್ಯಾಪ್ಟನ್ ಸಮೀರ್ ಆಚಾರ್ಯ ಅವರು ಮುಖಂಡರಾದರೆ, ಇನ್ನೊಂದು ತಂಡಕ್ಕೆ ಅನುಪಮ ಗೌಡ ಅವರು ಮುಖಂಡರಾಗಿದ್ದರು. ಬಿಗ್ ಬಾಸ್ ವಿವಿಧ ಸವಾಲುಗಳನ್ನು ಎರಡು ತಂಡಕ್ಕೂ ನೀಡುತ್ತಿದ್ದು, ಸದಸ್ಯರು ಕೂಡ ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

 
ಆದರೆ ನಿನ್ನೆಯ ದಿನ ಬಿಗ್ ಬಾಸ್ ಕೊನೆಯ ಸವಾಲ್ ಒಂದನ್ನು ನೀಡಿದ್ದು, ಅದರ ಪ್ರಕಾರ ತಂಡದ ಮುಖಂಡರಾದ ಅನುಪಮ ಹಾಗು ಸಮೀರ್ ಆಚಾರ್ಯ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಎದುರಾಳಿ ತಂಡದವರು ಅವರನ್ನು ಕುರ್ಚಿಯಿಂದ ಎಬ್ಬಿಸಬೇಕಿತ್ತು. ಅದೇರೀತಿ ತಂಡದ ಸದಸ್ಯರು  ಕೂಡ ಅವರಿಬ್ಬರನ್ನು ಎಬ್ಬಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದರು. ಸದಸ್ಯರು ಎಷ್ಟೇ ಪ್ರಯತ್ನಿಸಿದರು ಅವರು ಕುರ್ಚಿಯಿಂದ ಏಳದೇ ಹಾಗೆ ಕುಳಿತಿದ್ದರು. ಆಗ ಸಮೀರ್ ಆಚಾರ್ಯ ಅವರನ್ನು ಎಬ್ಬಿಸಲು  ಎದುರಾಳಿ ತಂಡದ ರಿಯಾಜ್ ಅವರು ಕುಳಿತಿದ್ದು ಕುರ್ಚಿಗೆ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಆದರೂ ಸಮೀರ್ ಆಚಾರ್ಯ ಅವರು ಏಳದೇ ಹಾಗೆ ಕುಳಿತಿದ್ದು, ಕೊನೆಗೆ ಟಾಸ್ಕನ್ನು ಗೆದ್ದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments