Select Your Language

Notifications

webdunia
webdunia
webdunia
webdunia

ತಲೈವಾ ನೋಡಲು ಹಿಮಾಲದವರೆಗೆ ಕಾಲ್ನಡಿಗೆ!,

ತಲೈವಾ ನೋಡಲು ಹಿಮಾಲದವರೆಗೆ ಕಾಲ್ನಡಿಗೆ!,
ಚೆನ್ನೈ , ಗುರುವಾರ, 17 ಆಗಸ್ಟ್ 2023 (17:01 IST)
ಸೂಪರ್‌ಸ್ಟಾರ್ ರಜನಿಕಾಂತ್ ಅವರು ದಿನದಿಂದ ದಿನಕ್ಕೆ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಇತ್ತ ಅವರ ಅಭಿನಯದ ಜೈಲರ್​ ಚಿತ್ರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದ್ದರೆ, ಅತ್ತ ರಜನಿಕಾಂತ್ ಹಿಮಾಲಯ ಪ್ರವಾಸದಲ್ಲಿದ್ದಾರೆ. ಇವರು ಹಿಮಾಲಯಕ್ಕೆ ಭೇಟಿ ನೀಡುವುದನ್ನು ತಿಳಿದ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನನ್ನು ನೋಡಲು 55 ದಿನಗಳವರೆಗೆ ಪಾದಯಾತ್ರೆ ಮಾಡಿ ಹಿಮಾಲಯವನ್ನು ತಲುಪಿದ್ದಾರೆ. 55 ದಿನಗಳ ಕಾಲ ಚೆನ್ನೈನಿಂದ ಉತ್ತರಾಖಂಡಕ್ಕೆ ನಡೆದುಕೊಂಡು ಹೋಗಿರುವ ಈ ಅಭಿಮಾನಿಗೆ, ರಜನಿಕಾಂತ್ ಅವರನ್ನು ಭೇಟಿಯಾಗುವ ಸೌಭಾಗ್ಯ ಒದಗಿ ಬಂದಿದೆ. ರಜನಿಕಾಂತ್ ಅವರನ್ನು ಭೇಟಿಯಾಗಿರುವ ವ್ಯಕ್ತಿಯ ಹೆಸರು ರಾ.ಅರ್ಜುನಮೂರ್ತಿ. ಉತ್ತರಾಖಂಡದಲ್ಲಿ ರಜನಿ ಅವರನ್ನು ಭೇಟಿಯಾದ ನಂತರ ಅವರು ಚಿತ್ರವನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ಭೇಟಿಯಾಗಲು ತಾವು ಚೆನ್ನೈನಿಂದ ಉತ್ತರಾಖಂಡದ ಮಹಾವತಾರ್ ಬಾಬಾಜಿಯ ಗುಹೆಗೆ 55 ದಿನಗಳ ಕಾಲ ನಡೆದು ಬಂದಿರುವುದಾಗಿ ತಿಳಿಸಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುತ್ತಿರುವ ವಿಷಯ ತಿಳಿಯುತ್ತಲೇ ರಜನೀಕಾಂತ್​ ಅವರು, ಅಭಿಮಾನಿಯನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷೇಪಾರ್ಹ ಹೇಳಿಕೆ ಪ್ರಕರಣದಲ್ಲಿ ನಟ ಉಪೇಂದ್ರಗೆ ಬಿಗ್ ರಿಲೀಫ್