Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಪೈರಸಿ ತಡೆಯಲು ಚಿತ್ರತಂಡ ಹೊಸ ಪ್ಲ್ಯಾನ್

ವಿಕ್ರಾಂತ್ ರೋಣ ಪೈರಸಿ ತಡೆಯಲು ಚಿತ್ರತಂಡ ಹೊಸ ಪ್ಲ್ಯಾನ್
ಬೆಂಗಳೂರು , ಬುಧವಾರ, 27 ಜುಲೈ 2022 (17:02 IST)
ಬೆಂಗಳೂರು: ನಾಳೆಯಿಂದ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ಸಿನಿಮಾ ಪೈರಸಿಯಾಗದಂತೆ ತಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಯಾವುದೇ ಹೊಸ ಸಿನಿಮಾವಿರಲಿ, ಬಿಡುಗಡೆಯಾದ ದಿನವೇ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಪ್ರತೀ ಸಿನಿಮಾ ತಂಡವೂ ತಮ್ಮಿಂದಾದ ಪ್ರಯತ್ನ ನಡೆಸುತ್ತಲೇ ಇರುತ್ತವೆ.

ಇದೀಗ ವಿಕ್ರಾಂತ್ ರೋಣ ತಂಡವೂ ಪೈರಸಿ ತಡೆಗೆ ಕ್ರಮ ಕೈಗೊಂಡಿದೆ. ನಿರ್ದೇಶಕ ಅನೂಪ್ ಭಂಡಾರಿ ವ್ಯಾಟ್ಸಪ್ ನಂಬರ್ ಒಂದನ್ನು ಪ್ರಕಟಿಸಿದ್ದು, ಸಿನಿಮಾ ಅಥವಾ ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದೆ ಎಂದು ಅನಿಸಿದ ತಕ್ಷಣ 8147824034 ಎಂಬ ಸಂಖ್ಯೆಗೆ ವ್ಯಾಟ್ಸಪ್ ಮಾಡಿ ಅಥವಾ [email protected] ಈ ಈಮೇಲ್ ಗೆ ಸಂದೇಶ ಕಳುಹಿಸಿ ಎಂದಿದ್ದಾರೆ. ಇದರಲ್ಲಿ ಚಿತ್ರತಂಡ ಎಷ್ಟು ಯಶಸ್ವಿಯಾಗುತ್ತದೋ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಬಿಡುಗಡೆಗೆ ಮೊದಲು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬರೆದ ಸಂದೇಶ