ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್

Krishnaveni K
ಶುಕ್ರವಾರ, 29 ಆಗಸ್ಟ್ 2025 (21:09 IST)
ಮೈಸೂರು: ಪತಿ ದರ್ಶನ್ ಜೈಲಿನಲ್ಲಿದ್ದರೂ ಅವರಿಗೆ ಇಷ್ಟವಾಗುವ ಕೆಲಸ ಮಾಡುವುದನ್ನು ಮಾತ್ರ ಪತ್ನಿ ವಿಜಯಲಕ್ಷ್ಮಿ ಮರೆತಿಲ್ಲ. ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಖುದ್ದಾಗಿ ತಾವೇ ಕುಕ್ಕರ್ ನೀಡಿ ಊಟ ಹಾಕಿಸಿದ್ದಾರೆ.

ನಟ ದರ್ಶನ್ ಪ್ರಾಣಿಪ್ರಿಯ. ಅದರಲ್ಲೂ ಆನೆಗಳ ಮೇಲೆ ಅವರಿಗೆ ವಿಶೇಷ ಮಮಕಾರ.  ಈ ಹಿಂದೆ ಅವರು ಆನೆ ದತ್ತು ತೆಗೆದುಕೊಂಡ ಉದಾಹರಣೆಯೂ ಇದೆ. ಈ ಹಿಂದೆ ಮೈಸೂರಿನ ಅರ್ಜುನ ಆನೆಗೆ ತಮ್ಮದೇ ಖರ್ಚಿನಲ್ಲಿ ಸಮಾಧಿ ನಿರ್ಮಾಣಕ್ಕೂ ಮುಂದೆ ಬಂದಿದ್ದರು.

ಇದೀಗ ಪತ್ನಿ ವಿಜಯಲಕ್ಷ್ಮಿ ಪತಿಗೆ ಇಷ್ಟವಾಗುವ ಕೆಲಸ ಮಾಡಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗ ಇತ್ತ ವಿಜಯಲಕ್ಷ್ಮಿ ಮೈಸೂರಿನ ದಸರಾ ಆನೆಗಳನ್ನು ನೋಡಿಕೊಳ್ಳುವ ಮಾವುತರನ್ನು ಭೇಟಿ ಮಾಡಿದ್ದು, ಖುದ್ದಾಗಿ ತಾವೇ ಸುಮಾರು 60 ಮಾವುತರ ಕುಟುಂಬದವರಿಗೆ ಕುಕ್ಕರ್ ಕೊಟ್ಟು ಭರ್ಜರಿ ಊಟವನ್ನೂ ಹಾಕಿಸಿದ್ದಾರೆ.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಮೈಸೂರಿನಲ್ಲಿ ದಸರಾ ಕಳೆಗಟ್ಟಲಿದೆ. ಅದಕ್ಕಾಗಿ ಈಗಾಗಲೇ 14 ಆನೆಗಳು ಅರಮನೆ ಆವರಣಕ್ಕೆ ಬಂದಿವೆ. ಇವುಗಳನ್ನು ನೋಡಿಕೊಳ್ಳುವ ಮಾವುತರನ್ನು ವಿಜಯಲಕ್ಷ್ಮಿ ಖುದ್ದಾಗಿ ಭೇಟಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಮುಂದಿನ ಸುದ್ದಿ
Show comments