Webdunia - Bharat's app for daily news and videos

Install App

ವರನಟ ಡಾ. ರಾಜ್ ಅಪಹರಣ ಪ್ರಕರಣಕ್ಕೆ 20 ವರ್ಷ: ಅಂದಿನ ಘಟನೆಯ ಮೆಲುಕು ಇಲ್ಲಿದೆ

Webdunia
ಗುರುವಾರ, 30 ಜುಲೈ 2020 (10:27 IST)
ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಕರಾಳ ದಿನಕ್ಕೆ ಇಂದು 20 ವರ್ಷ ತುಂಬಿದೆ. ಡಾ. ರಾಜ್ ನಿವಾಸದಿಂದ ರಾತ್ರೋ ರಾತ್ರಿ ವೀರಪ್ಪನ್ ಅಪಹರಣ ಮಾಡಿದ್ದ.


ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಅಭಿಮಾನಿಗಳು ತಲ್ಲಣಗೊಳ್ಳುವಂತೆ ಮಾಡಿತ್ತು. ಇದಾದ ಬಳಿಕ ಬರೋಬ್ಬರಿ 108 ದಿನಗಳ ಕಾಲ ಡಾ. ರಾಜ್ ವೀರಪ್ಪನ್ ವಶದಲ್ಲಿದ್ದರು.  ಹಲವು ಸುತ್ತಿನ ಸಂಧಾನದ ಬಳಿಕ ಡಾ. ರಾಜ್ ರನ್ನು ಬಿಡುಗಡೆ ಮಾಡಿದ್ದ.

ಅಂದು ನಡೆದಿದ್ದೇನು?: ಜುಲೈ 30 ರ ರಾತ್ರಿ ಗಾಜನೂರಿನ ಮನೆಯಲ್ಲಿ ಡಾ. ರಾಜ್ ಊಟ ಮುಗಿಸಿ ಎಲೆ ಅಡಿಕೆ ಹಾಕುತ್ತಾ ಕೂತಿದ್ದಾಗ ವೀರಪ್ಪನ್ ತನ್ನ ಸಹಚರರೊಂದಿಗೆ ಬಂದು ದಾಳಿ ಮಾಡಿದ್ದ. ಡಾ. ರಾಜ್ ರ ಬೆನ್ನಿಗೆ ಬಂದೂಕು ಹಿಡಿದು ಕೈಗಳನ್ನು ಕಟ್ಟಿ ವಶಕ್ಕೆ ತೆಗೆದುಕೊಂಡಿದ್ದ. ಡಾ. ರಾಜ್ ಜತೆಗೆ ಮನೆಯಲ್ಲಿದ್ದ ಮೂವರನ್ನು ಅಪಹರಿಸಿದ್ದ.

ಆ ವೇಳೆ ಪಾರ್ವತಮ್ಮ ರಾಜಕುಮಾರ್ ಅವರನ್ನು ಬಿಟ್ಟುಬಿಡು ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬಿಡಲಿಲ್ಲ. ಕೊನೆಗೆ ಡಾ. ರಾಜ್ ವೀರಪ್ಪನ್ ಜತೆ ಹೊರಡಲೇಬೇಕಾಯಿತು. ಈ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಯಾದ ತಕ್ಷಣ ಮಧ್ಯರಾತ್ರಿ ವೇಳೆ ಪಾರ್ವತಮ್ಮ ಚಾಮರಾಜನಗರಕ್ಕೆ ಬಂದು ಅಲ್ಲಿಂದ ಎಸ್ ಟಿಡಿ ಬೂತ್ ಮೂಲಕ ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments