Select Your Language

Notifications

webdunia
webdunia
webdunia
webdunia

ಪಾರ್ವತಮ್ಮ ನೆನೆದು ಕಣ್ಣೀರು ಹಾಕಿದ ಉಮಾಶ್ರೀ, ಸುಧಾರಾಣಿ

ಪಾರ್ವತಮ್ಮ ನೆನೆದು ಕಣ್ಣೀರು ಹಾಕಿದ ಉಮಾಶ್ರೀ, ಸುಧಾರಾಣಿ
Bangalore , ಬುಧವಾರ, 31 ಮೇ 2017 (11:39 IST)
ಬೆಂಗಳೂರು: ಇಂದು ಅಗಲಿದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೆನೆದು ಕನ್ನಡ ಚಿತ್ರರಂಗದ ಗಣ್ಯರು, ಪಾರ್ವತಮ್ಮನಿಂದಾಗಿ ಚಿತ್ರರಂಗದಲ್ಲಿ ಮಿಂಚಿದ ಕಲಾವಿದರು ಕಂಬನಿ ಮಿಡಿದಿದ್ದಾರೆ.

 
ಚಿತ್ರರಂಗದ ತಾಯಿಯಾಗಿದ್ದವರು ಪಾರ್ವತಮ್ಮ. ನಾನು ಅವರ ಬ್ಯಾನರ್ ನ ಚಿತ್ರಗಳಲ್ಲಿ ಅಭಿನಯಿಸಿದ್ದು ಕಡಿಮೆಯಾದರೂ, ಭೇಟಿಯಾದಾಗಲೆಲ್ಲಾ ಆ ಚಿತ್ರಗಳನ್ನು ನೆನೆಸಿಕೊಂಡು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು ಎಂದು ಕಣ್ಣೀರು ಮಿಡಿಯುತ್ತಾ ಉಮಾಶ್ರೀ ಪಾರ್ವತಮ್ಮನವರನ್ನು ನೆನೆದಿದ್ದಾರೆ.

ಪಾರ್ವತಮ್ಮನಿಂದಾಗಿಯೇ ಚಿತ್ರರಂಗಕ್ಕೆ ಬಂದ ನಟಿ ಸುಧಾರಾಣಿ ಕೂಡಾ ಅವರ ಬಗ್ಗೆ ಹೇಳುತ್ತಾ ಗದ್ಗದಿತರಾದರು. ಹೆಚ್ಚು ಮಾತನಾಡದೇ ಮರಳಿದರು. ಇನ್ನು, ನಟಿ ಲೀಲಾವತಿ ಕೂಡಾ ತಮ್ಮ ಹಳೆಯ ದಿನಗಳನ್ನು ಹೇಳುತ್ತಾ ಕಣ್ಣೀರು ಮಿಡಿದರು.

ಈಗಿನ ನಟ, ನಟಿಯರಿಂದ ಹಿಡಿದು ಹಿರಿ ಕಿರಿಯ ಕಲಾವಿದರೆಲ್ಲರೂ ಸಾಲು ಸಾಲಾಗಿ ಬಂದು ಕಣ್ಣೀರು ಮಳೆಗೈಯುತ್ತಲೇ ಅಗಲಿದ ಅಮ್ಮನ ದರ್ಶನ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಎದುರು ನಟಿ ಪ್ರಿಯಾಂಕ ಚೋಪ್ರಾ ಕುಳಿತ ಭಂಗಿಗೆ ಟೀಕೆ!