Webdunia - Bharat's app for daily news and videos

Install App

ಕಿಚ್ಚ ಸುದೀಪ್ ರ ಟಾಪ್ 5 ವಿವಾದಗಳು

Webdunia
ಬುಧವಾರ, 12 ಜುಲೈ 2023 (08:50 IST)
ಬೆಂಗಳೂರು: ಕಿಚ್ಚ ಸುದೀಪ್ ವಿರುದ್ಧ ಕೆಲವು ನಿರ್ಮಾಪಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಗಳ ಸುರಿಮಳೆಗೈದಿದ್ದಾರೆ. ಇದಕ್ಕೆ ಸುದೀಪ್ ಕಡೆಯಿಂದಲೂ ಕಾನೂನು ಹೋರಾಟ ನಡೆದಿದೆ. ಸುದೀಪ್ ಚಿತ್ರಜೀವನದಲ್ಲಿ ಇದುವರೆಗೆ ನಡೆದ ಟಾಪ್ 5 ವಿವಾದಗಳ ಬಗ್ಗೆ ಇಲ್ಲಿ ನೋಡೋಣ.

ರಮ್ಯಾ ಜೊತೆ ಕಿತ್ತಾಟ: ಕಿಚ್ಚ ಸುದೀಪ್ ಮತ್ತು ರಮ್ಯಾ ಆನ್ ಸ್ಕ್ರೀನ್ ನಲ್ಲಿ ಬೆಸ್ಟ್ ಜೋಡಿ ಎನಿಸಿದರೂ 2009 ರ ಕಾಲಘಟ್ಟದಲ್ಲಿ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಶೂಟಿಂಗ್ ವೇಳೆ ರಮ್ಯಾ ವಿರುದ್ಧ ಸುದೀಪ್ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಇಬ್ಬರ ನಡುವೆ ಮತ್ತೆಯೂ ಶೀತಲ ಸಮರ ಮುಂದುವರಿದಿತ್ತು. ಹಾಗಿದ್ದರೂ ಈಗಲೂ ಇಬ್ಬರೂ ಸ್ನೇಹಿತರಾಗಿರುವುದು ಅಚ್ಚರಿಯ ವಿಚಾರ.

ನಿರ್ದೇಶಕ ಸಾಗರ್ ಗೆ ಕಪಾಳಮೋಕ್ಷ: 2010 ರಲ್ಲಿ ಕನ್ವರ್ ಲಾಲ್ ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಸಾಗರ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಬಳಿಕ ಸುದೀಪ್ ಇದೆಲ್ಲಾ ಶುದ್ಧ ಸುಳ್ಳು ಎಂದು ಅಲ್ಲಗಳೆದಿದ್ದರು.

ಶಿವಣ್ಣ-ಸುದೀಪ್ ಶೀತಲ ಸಮರ: 2011 ರಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದರು. ಇದರಿಂದ ಇಬ್ಬರು ಸ್ಟಾರ್ ಗಳ ನಡುವೆ ಅಸಮಾಧಾನವೇರ್ಪಟ್ಟಿತ್ತು ಎನ್ನಲಾಗಿತ್ತು. ಆದರೆ ಬಳಿಕ ಸುದೀಪ್ ಈ ಬಗ್ಗೆ ಹೇಳಿಕೆ ನೀಡಿ ಇದು ಅಭಿಮಾನಿಗಳೇ ಕಾರಣ. ತಮ್ಮಿಬ್ಬರ ಪಾತ್ರವೇನೂ ಇಲ್ಲ ಎಂದು ಹೇಳಿಕೆ ನೀಡಿದ್ದರು.

ದರ್ಶನ್-ಸುದೀಪ್ ಕಲಹ: ಒಂದು ಕಾಲದಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ದರ್ಶನ್-ಸುದೀಪ್ ನಡುವೆ ಮೂಡಿದ್ದ ಬಿರುಕು ಇಂದಿಗೂ ಸರಿಹೋಗಿಲ್ಲ. ಮೆಜೆಸ್ಟಿಕ್ ನಲ್ಲಿ ದರ್ಶನ್ ರನ್ನು ಹೀರೋ ಮಾಡಲು ತಾನೇ ನಿರ್ಮಾಪಕರಿಗೆ ಸೂಚಿಸಿದ್ದಾಗಿ ಸುದೀಪ್ ಹೇಳಿದ್ದು ದರ್ಶನ್ ಕೆಂಗಣ್ಣಿಗೆ ಗುರಿಯಾಗಿತ್ತು. ಅದಾದ ಬಳಿಕ ಸ್ವತಃ ದರ್ಶನ್ ಇನ್ನು ಮುಂದೆ ನಾವು ಗೆಳೆಯರಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಮುನಿಸು ಇಂದಿಗೂ ಮರೆಯಾಗಿಲ್ಲ.

ಕೋಟಿಗೊಬ್ಬ ನಿರ್ಮಾಪಕನ ಜೊತೆ ವೈಮನಸ್ಸು: ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಿರಲಿಲ್ಲ. ಈ ಸಿನಿಮಾ ಬಿಡುಗಡೆಯೂ ಸಾಕಷ್ಟು ಕಾರಣಗಳಿಂದ ತಡವಾಗಿತ್ತು. ಈ ವೇಳೆ ಸುದೀಪ್ ನಿರ್ಮಾಪಕ ಸೂರಪ್ಪ ಬಾಬು ಮೇಲೆ ಅಸಮಾಧಾನಗೊಂಡಿದ್ದರು ಎಂಬ ಸುದ್ದಿ ಹರಡಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments