Select Your Language

Notifications

webdunia
webdunia
webdunia
webdunia

ಖ್ಯಾತ ಗಾಯಕ ಎಸ್.ಪಿ.ಬಿ ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್

ಚೆನ್ನೈ
ಚೆನ್ನೈ , ಶನಿವಾರ, 26 ಸೆಪ್ಟಂಬರ್ 2020 (10:20 IST)
ಚೆನ್ನೈ : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ವಿಧಿವಶರಾದ ಹಿನ್ನಲೆಯಲ್ಲಿ ಟಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

ಸಂಗೀತ ಲೋಕಕ್ಕೆ ಇಂದು ಕರಾಳ ದಿನ. ನನ್ನ ಯಶಸ್ವಿಗೆ ಬಾಲು ಅವರ ಧ್ವನಿಯ ಪಾತ್ರ ಹೆಚ್ಚಿದೆ ಎಂದು ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇನ್ನು ಮುಂದೆ ಇಲ್ಲ ಎಂಬ ವಿಚಾರ ಸ್ಮರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಟ ಮಹೇಶ್ ಬಾಬು ಭಾವುಕರಾಗಿದ್ದಾರೆ.

ಭಾರತೀಯ ಸಂಗೀತವು ತನ್ನ ಮುದ್ದು ಮಗುವನ್ನು ಕಳೆದುಕೊಂಡಿದೆ.ಈ ಭೂಮಿಯಲ್ಲಿ ಸಂಗೀತ ಇರುವವರೆಗೂ ನೀವು ಅಮರರಾಗುತ್ತೀರಿ ಎಂದು ನಟ ಜೂನಿಯರ್ ಎನ್ ಟಿಆರ್ ಹೇಳಿದ್ದಾರೆ. ನಟ ನಾನಿ ತಮ್ಮ ಕುಟುಂಬದೊಂದಿಗೆ ಬಾಲಸುಬ್ರಹ್ಮಣ್ಯಂ ಅವರು ಇರುವ ಫೋಟೊ ಹಾಕಿ ಸಂತಾಪ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡ್ರಾ ಮಹೇಶ್ ಬಾಬು ಪತ್ನಿ