Select Your Language

Notifications

webdunia
webdunia
webdunia
webdunia

ದರ್ಶನ್‌ ತಂಗಿದ್ದ ಮೈಸೂರು ಹೊಟೇಲ್‌ನಲ್ಲಿ ಸ್ಥಳ ಮಹಜರು ಸಾಧ್ಯತೆ

ದರ್ಶನ್‌ ತಂಗಿದ್ದ ಮೈಸೂರು ಹೊಟೇಲ್‌ನಲ್ಲಿ ಸ್ಥಳ ಮಹಜರು ಸಾಧ್ಯತೆ

sampriya

ಬೆಂಗಳೂರು , ಭಾನುವಾರ, 16 ಜೂನ್ 2024 (10:26 IST)
ಬೆಂಗಳೂರು:  ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯು ಚುರುಕುಗೊಂಡಿದ್ದು, ಇದೀಗ ಪೊಲೀಸರು ಮೈಸೂರಿನಲ್ಲಿ ಮಹಜರು ನಡೆಸಲಿದ್ದಾರೆ.  ಪ್ರಕರಣ ಎ 2 ಆರೋಪಿಯಾಗಿರುವ ನಟ ದರ್ಶನ್‌ ಅವರು ರೇಣುಕಸ್ವಾಮಿ ಹತ್ಯೆ ಬಳಿಕ ಮೈಸೂರಿಗೆ ತೆರಳಿದ್ದರು. ಇನ್ನೂ ಖಾಸಗಿ ಹೊಟೇಲ್‌ನಲ್ಲಿ ಇದ್ದುಕೊಂಡು ಅಲ್ಲಿಂದಲೇ ಮೃತದೇಹ ವಿಲೇವಾರಿಗೆ ಕರೆ ಮಾಡಿರುವ ಶಂಕೆಯಿದೆ.  ಈ ಹಿನ್ನೆಲೆ  ಅವರು ತಂಗಿದ್ದ ಹೊಟೇಲ್‌ ಹಾಗೂ ಇತರ ಕಡೆಗಳಲ್ಲಿ ಸ್ಥಳ ಮಹಜರು ಸಾಧ್ಯತೆಯಿದೆ.

ಇನ್ನೂ ಸ್ಥಳ ಮಹಜರು ಹಿನ್ನೆಲೆ ದರ್ಶನ್‌ ಅವರನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆಯಿದೆ.  ಇನ್ನೂ ದರ್ಶನ್‌ ಅವರು ಮೈಸೂರಿಗೆ ಹೋಗುವಾಗ ಬಳಸಿದ್ದ ಕಾರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ದರ್ಶನ್‍ನ ವಶಕ್ಕೆ ಪಡೆಯುವಾಗ ತನ್ನ ಕಾರಲ್ಲೇ ಬರೋದಾಗಿ ಹೇಳಿದ್ದರು. ಇದಕ್ಕೆ ಒಪ್ಪದ ಪೊಲೀಸರು ತಮ್ಮ ಬೊಲೆರೊ ಜೀಪ್‍ನಲ್ಲೇ ಕರೆತಂದಿದ್ದರು. ಹೀಗಾಗಿ ಕಳೆದ ಮಂಗಳವಾರದಿಂದ ಕಾರು ಮೈಸೂರಿನ ಹೋಟೆಲ್ ಬಳಿ ಇದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಮುಗಿಸಿದ 'ಡಿ ಗ್ಯಾಂಗ್‌'