Select Your Language

Notifications

webdunia
webdunia
webdunia
webdunia

ದರ್ಶನ್‌ ಮಾಡಿದ್ದು ಸರಿ ಎಂದ ಸಮೀರ್ ಆಚಾರ್ಯ್‌ಗೆ ಯಾವ ಕೋರ್ಟ್ ಜಡ್ಜ್‌ ಎಂದ ನೆಟ್ಟಿಗರು

Darshan

Sampriya

ಬೆಂಗಳೂರು , ಮಂಗಳವಾರ, 3 ಸೆಪ್ಟಂಬರ್ 2024 (20:14 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಮಾಡಿದ್ದು ಶೇ 100 ಸರಿಯಾಗಿದೆ ಎಂದು ಬಿಗ್‌ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹೇಳಿದರು.

ಸಮೀರ್ ಆಚಾರ್ಯ ಅವರು ದರ್ಶನ್ ಪರ ಬ್ಯಾಟಿಂಗ್ ಮಾಡಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಮಾಡಿದ ತಪ್ಪು ಅಷ್ಟೇ ಬೆಳಕಿಗೆ ಬರುತ್ತಿದೆ. ಆದರೆ ರೇಣುಕಾಸ್ವಾಮಿಯ ತಪ್ಪುಗಳನ್ನು ಯಾಕೆ ಮರೆಮಾಚಲಾಗುತ್ತಿದೆ ಎಂದು ಪ್ರಶ್ನಿಸಿದರು.

ದೇಶವನ್ನೇ ಬೆಚ್ಚಿಬೀಳಿಸಿದ  ಹುಬ್ಬಳ್ಳಿ ನೇಹಾ ಹಿರೇಮಠ್ ಕೇಸ್‌ನಲ್ಲಿ ಸಂತ್ರಸ್ತೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಿರುವಾಗ ದರ್ಶನ್ ಮಾಡಿದ್ದು ಹೇಗೆ ತಪ್ಪು ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಇದನ್ನು ನೋಡಿದ ನೆಟ್ಟಿಗರು ನೀವು ಯಾವ ಕೋರ್ಟ್‌ ಜಡ್ಜ್‌ ಎಂದು ಪ್ರಶ್ನಿಸಿದ್ದಾರೆ.


ದರ್ಶನ್ ಅವರಿಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಅವರಿಗೆ ಗುರುದೆಸೆ ಬಂದಾಗ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು.

ದರ್ಶನ್ ಅವರು ಮಾಡಿದ ಒಳ್ಳೆಯ ಕಾರ್ಯವನ್ನು ಯಾಕೆ ಪ್ರಚಾರ ಮಾಡ್ತೀಲ್ಲ. ದರ್ಶನ್ ಅವರನ್ನು ಕಾನೂನನ್ನು ಕೈಗೆತ್ತಿಕೊಂಡಿದ್ದು ತಪ್ಪು ಆದರೆ ರೇಣುಕಾಸ್ವಾಮಿ ಮಾಡಿದ ತಪ್ಪನ್ನು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ದರ್ಶನ್ ಅವರ ನಡೆಯಿಂದ ಇನ್ನು ಮುಂದೆ ಯಾರು ಹುಡುಗಿಯರನ್ನು ಈ ರೀತಿ ನಡೆಸಿಕೊಳ್ಳಬಾರದೆಂದ ಸಂದೇಶವನ್ನು ಕೊಟ್ಟಿದ್ದಾರೆ. ಈ ಭಯದಲ್ಲರೂ ಮುಂದೆ ಇಂತಹ ಕೃತ್ಯವನ್ನು ಯಾರು ಮಾಡಬಾರದುರ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಇರುವ ಬಳ್ಳಾರಿನ ಜೈಲಿನ ಹೊರಭಾಗಕ್ಕೆ ಸಿಸಿಟಿವಿ ಅಳವಡಿಗೆ