Webdunia - Bharat's app for daily news and videos

Install App

ಸಿನಿಮಾ ಸೋತಿದ್ದಕ್ಕೆ ಬ್ಯಾಂಕ್ ಗೆ 42 ಲಕ್ಷ ರೂ. ವಂಚಿಸಿದ ನಿರ್ದೇಶಕ!

Webdunia
ಮಂಗಳವಾರ, 17 ಆಗಸ್ಟ್ 2021 (21:12 IST)
ಸಿನಿಮಾ ಸೋತಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಅಡ್ಡದಾರಿ ತುಳಿಯಲು ಹೋಗಿ ಈಗ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
2016ರಲ್ಲಿ ಮಧುರ ಸ್ವಪ್ನ ಎಂಬ ಚಿತ್ರ ನಿರ್ದೇಶಿಸಿದ್ದ ಕರಮಲ ಬಾಲರವೀಂದ್ರನಾಥ್ ಬ್ಯಾಂಕ್ ಗೆ 42 ಲಕ್ಷ ರೂ. ವಂಚಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ವಚಂನೆಗೆ ಸಹಾಯ ಮಾಡಿದ ಚಿನ್ನದ ಕಸೂತಿ ಕೆಲಸ ಮಾಡುವ ಶಿವಕುಮಾರ್ ಈ ಹಣ ಮಾಡಲು ಅನುಸರಿಸಿದ ಮಾರ್ಗ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಖಾಸಗಿ ಬ್ಯಾಂಕ್ ಗೆ ಚಿನ್ನ ಅಡವಿಟ್ಟು 42.91 ಲಕ್ಷ ರೂ. ಸಾಲ ಪಡೆದಿದ್ದ ಕರಮಲ ಬಾಲ ರವೀಂದ್ರನಾಥ್, ಬಡ್ಡಿ ಕೂಡ ಕಟ್ಟದೇ ಆರಾಮಾಗಿ ಇದ್ದರು. ಬಡ್ಡಿ ಕಟ್ಟದೇ ಇರುವುದಕ್ಕೆ ಬ್ಯಾಂಕ್ ನೋಟಿಸ್ ಕಳಿಸಿದರೂ ಪ್ರತಿಕ್ರಿಯಿಸಿರಲಿಲ್ಲ. ಕೊನೆಗೆ ಚಿನ್ನದ ಆಭರಣ ಹರಾಜು ಹಾಕುವುದಾಗಿ ನೋಟಿಸ್ ಕಳುಹಿಸಿದರೂ ನಿರ್ದೇಶಕ ಕ್ಯಾರೇ ಅನ್ನದೇ ಇದ್ದಿದ್ದು ಅನುಮಾನ ಮೂಡಿಸಿತು.
ಬ್ಯಾಂಕ್ ಅಧಿಕಾರಿಗಳು ಚಿನ್ನಾಭರಣ ಪರಿಶೀಲಿಸಿದಾಗ ಮೇಲೆ ಚಿನ್ನ ಇದ್ದರೂ ಒಳಗೆ ಬೇರೆ ಲೋಹ ತುಂಬಿತ್ತು. ಕೂಡಲೇ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ರಾಜಾಜಿನಗರದಲ್ಲಿ ವಾಸವಾಗಿದ್ದ ನಿರ್ದೇಶಕರನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವು ಬ್ಯಾಂಕ್ ಗಳಿಗೆ ವಂಚಿಸಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Kamal Hassan, ಮತ್ತೇ ಕನ್ನಡಿಗರು ರೊಚ್ಚಿಗೇಳುವಂತಾ ಕೌಂಟರ್‌ ಕೊಟ್ಟ ನಟ ಕಮಲ್ ಹಾಸನ್

ರೋಡಿಗಿಳಿದು ಅಧಿಕಾರಿಗಳಲ್ಲಿ ವಿಶೇಷ ಮನವಿ ಮಾಡಿದ ಅನಿರುದ್ಧ್‌, ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ

ಕನ್ನಡ ವಿವಾದದ ಬೆನ್ನಲ್ಲೇ ರಾಜ್ಯಸಭೆಯತ್ತ ಕಮಲ್‌ ಹಾಸನ್‌: ಅಭ್ಯರ್ಥಿ ಘೋಷಿಸಿದ ಮಕ್ಕಳ್ ನೀಧಿ ಮಯ್ಯಂ

Jaggesh: ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿದ್ದನ್ನೆಲ್ಲಾ ಒಪ್ಪಕ್ಕಾಗಲ್ಲ: ಜಗ್ಗೇಶ್

Shivanna: ಕಮಲ್ ಹಾಸನ್ ಅಪ್ಪಿಕೊಂಡ ಮೂರು ದಿನ ಸ್ನಾನ ಮಾಡಿರಲಿಲ್ಲ: ಶಿವಣ್ಣ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments