Webdunia - Bharat's app for daily news and videos

Install App

ಕಾಟೇರ ಸಿನಿಮಾಗೆ ಮೊದಲು ಫಿಕ್ಸ್ ಆಗಿದ್ದ ಟೈಟಲ್ ಬೇರೆ

Krishnaveni K
ಗುರುವಾರ, 22 ಫೆಬ್ರವರಿ 2024 (14:19 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಬಿಡುಗಡೆಯಾಗಿ 50 ದಿನಗಳ ನಂತರ ಇದೀಗ ಟೈಟಲ್ ವಿಚಾರವಾಗಿ ವಿವಾದ ಹುಟ್ಟಿಕೊಂಡಿದೆ.

ಟೈಟಲ್ ಕೊಟ್ಟವರು ಯಾರು ಎಂಬ ವಿಚಾರವಾಗಿ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಗೌಡ ನಡುವೆ ಜಟಾಪಟಿ ನಡೆದಿದೆ. 50 ನೇ ದಿನದ ಯಶಸ್ವೀ ಕಾರ್ಯಕ್ರಮದ ವೇಳೆ ದರ್ಶನ್ ಟೈಟಲ್ ಇಟ್ಟಿದ್ದೇ ನಾನು ಎಂದು ಉಮಾಪತಿ ಗೌಡಗೆ ಟಾಂಗ್ ಕೊಟ್ಟಿದ್ದರು. ಉಮಾಪತಿ ಗೌಡರನ್ನು ‘ತಗಡು’ ಎಂದು ಸಂಬೋಧಿಸಿದ್ದರು. ಇದು ವಿವಾದಕ್ಕೆ ಕಾರಣವಾಯಿತು. ಇದಕ್ಕೆ ಉಮಾಪತಿ ಗೌಡ ಕೂಡಾ ತಿರುಗೇಟು ನೀಡಿದ್ದರು.

ಇದರ ಬೆನ್ನಲ್ಲೇ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಟೇರ ನಿರ್ದೇಶಕ ತರುಣ್ ಸುಧೀರ್ ಈ ಟೈಟಲ್ ವಿವಾದದ ಕುರಿತಾಗಿ ಮಾತನಾಡಿದ್ದಾರೆ. ಅಸಲಿಗೆ ನಾವು ಈ ಸಿನಿಮಾಗೆ ಇಟ್ಟಿದ್ದ ಟೈಟಲ್ಲೇ ಬೇರೆಯಾಗಿತ್ತು. ಕಾಟೇರ ಎಂದು ಮೊದಲಿಗೆ ಟೈಟಲ್ ಇರಲಿಲ್ಲ ಎಂದಿದ್ದಾರೆ.

ಮೊದಲು ಈ ಸಿನಿಮಾಗೆ ‘ಚೌಡಯ್ಯ’ ಎಂದು ಟೈಟಲ್ ಇಡಲಾಗಿತ್ತು. ಬಳಿಕ ದರ್ಶನ್ ಅವರೇ ಕಾಟೇರ ಎಂದು ಟೈಟಲ್ ಇಡಲು ಸೂಚಿಸಿದರು ಎಂದಿದ್ದಾರೆ. ಮೊನ್ನೆ ಕಾಟೇರ ಸಕ್ಸಸ್ ಪಾರ್ಟಿಯ ವೇದಿಕೆಯಲ್ಲೂ ತರುಣ್ ಗೆ ದರ್ಶನ್ ಟೈಟಲ್ ಕೊಟ್ಟಿದ್ದು ಯಾರು ಎಂದು ಕೇಳಿದಾಗ ನೀವೇ ಎಂದು ದರ್ಶನ್ ಹೆಸರು ಹೇಳಿದ್ದರು. ಇದೀಗ ಮತ್ತೆ ತರುಣ್ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

ಮುಂದಿನ ಸುದ್ದಿ
Show comments