Webdunia - Bharat's app for daily news and videos

Install App

ಗೋಲ್ಡನ್‌ ವೀಸಾ ಪಡೆದ ಬೆನ್ನಲ್ಲೇ ಅಬುಧಾಬಿಯ ಹಿಂದೂ ದೇವಾಲಯಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಭೇಟಿ

sampriya
ಶುಕ್ರವಾರ, 24 ಮೇ 2024 (19:30 IST)
Photo By X
ಅಬುದಾಬಿ:  ಅಬುಧಾಬಿ ಸರ್ಕಾರದಿಂದ ಗೋಲ್ಡನ್‌ ವೀಸಾ ಪಡೆದ ಬೆನ್ನಲೈ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಸಿನಿಮಾಗಳ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಅಬುಧಾಬಿ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ರಜನಿಕಾಂತ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸದ್ಯ ರಜನಿಕಾಂತ್‌ ಅವರು ಜೈ ಭೀಮ್ ನಿರ್ದೇಶಕನ ಜೊತೆಗಿನ ಸಿನಿಮಾ ಪೂರ್ಣಗೊಳಿಸಿದ ಬೆನ್ನಲ್ಲೇ ಅಬುಧಾಬಿಗೆ ಹಾರಿದ್ದಾರೆ. ಅಲ್ಲಿ ದೇವಸ್ಥಾನದಲ್ಲಿ ಕೆಲ ಸಮಯ ಕಳೆದಿದ್ದಾರೆ. ದೇವಸ್ಥಾನದ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಕೊನೆಯಲ್ಲಿ ರಜನಿಕಾಂತ್‌ ಅವರ ಕೈಗೆ ಧಾರವನ್ನು ಕಟ್ಟಿ, ಪುಸ್ತಕವೊಂದನ್ನು ನೀಡಿ ಮಂದಿರದಿಂದ ಬೀಳ್ಕೊಡಲಾಗಿದೆ. ಸದ್ಯ ರಜನಿಕಾಂತ್ ಭೇಟಿ ನೀಡಿರುವ ಸುಂದರ ವಿಡಿಯೋವೊಂದು ಇದೀಗ ಸಾಮಾಹಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಂದಹಾಗೆ, ಜೈಲರ್ ಸೀಕ್ವೆಲ್ ಮತ್ತು ಕೂಲಿ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.

ಗುರುವಾರ ರಜನಿಕಾಂತ್‌ ಅವರು ಅಬುಧಾಬಿ ಸರ್ಕಾರದ ಕಾರ್ಯಕಾರಿ ಮಂಡಳಿ ಸದಸ್ಯ ಹಾಗೂ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಮೊಹಮ್ಮದ್‌ ಖಲೀಫಾ ಅಲ್‌ ಮುಬಾರಕ್‌ ಅವರಿಂದ ಗೋಲ್ಡನ್‌ ವೀಸಾ ಪಡೆದಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

Rakesh Poojari: ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿಗಳು ಟೀಂನಿಂದ ದೊಡ್ಡ ನಿರ್ಧಾರ

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

ಮುಂದಿನ ಸುದ್ದಿ
Show comments