Publish Date: Wed, 30 Dec 2020 (11:01 IST)
Updated Date: Wed, 30 Dec 2020 (11:03 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ 11 ನೇ ಪುಣ್ಯಸ್ಮರಣೆಯಂದು ಅವರ ಕುಚಿಕು ಗೆಳೆಯ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಶ್ ಇಬ್ಬರ ಸ್ನೇಹವನ್ನು ಸ್ಮರಿಸಿಕೊಂಡಿದ್ದಾರೆ.
ವಿಷ್ಣುವರ್ಧನ್ ಚಿರಾಯು ಎಂದಿರುವ ಸುಮಲತಾ ಸ್ನೇಹ, ಪ್ರೀತಿಗೆ ಸಾಕಾರ ಮೂರ್ತಿಯಾಗಿದ್ದವರು ವಿಷ್ಣುವರ್ಧನ್ ಎಂದಿದ್ದಾರೆ. ಇಂದು ಅವರು ನಮ್ಮ ಕಣ್ಣ ಮುಂದೆ ಇಲ್ಲದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಜನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ ಎಂದು ಸುಮಲತಾ ವಿಷ್ಣು ಸ್ಮರಣೆ ಮಾಡಿದ್ದಾರೆ.