Select Your Language

Notifications

webdunia
webdunia
webdunia
webdunia

ಕೆಜಿಎಫ್ ಸಕ್ಸಸ್ ನಲ್ಲಿ ತೇಲುತ್ತಿರುವ ಯಶ್ ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?

ಕೆಜಿಎಫ್ ಸಕ್ಸಸ್ ನಲ್ಲಿ ತೇಲುತ್ತಿರುವ ಯಶ್ ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಬೆಂಗಳೂರು , ಸೋಮವಾರ, 24 ಡಿಸೆಂಬರ್ 2018 (09:45 IST)
ಬೆಂಗಳೂರು: ಕೆಜಿಎಪ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ಸುಮಲತಾ ಅಂಬರೀಶ್ ಹೆಮ್ಮೆಯಿಂದಲೇ ಬೆನ್ನು ತಟ್ಟಿದ್ದಾರೆ.


ಅಂಬರೀಶ್ ರನ್ನು ಅಪ್ಪಾಜಿಯಂತೇ ಕಾಣುತ್ತಿದ್ದ ಅವರು ತೀರಿಕೊಂಡಾಗ ಕುಟುಂಬದವರಂತೇ ಕೊನೆಯವರೆಗೂ ಜತೆಗಿದ್ದವರು. ನಂತರ ಕೆಜಿಎಫ್ ಬಿಡುಗಡೆಯಾದ ದಿನವೂ ಯಶ್ ಅಂಬರೀಶ್ ರನ್ನು ನೆನೆದು ಮಿಸ್ ಯೂ ಅಣ್ಣಾ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಮರಿಸಿದ್ದರು.

ಈಗ ಕೆಜಿಎಫ್ ಬಿಡುಗಡೆಯಾಗಿ ಮೂರು ದಿನಗಳು ಕಳೆದಿದ್ದು, ಯಶ್ ಗೆ ಸುಮಲತಾ ಅಭಿನಂದಿಸಿದ್ದಾರೆ. ‘ಕೆಜಿಎಫ್ ಪಕ್ಕಾ ಗೋಲ್ಡ್. ಕನ್ನಡದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಲಾದ ಸಿನಿಮಾ. ಯಶ್ ನಿಮ್ಮ ಸಾಹಸ, ಪರಿಶ್ರಮಕ್ಕೆ ಸಂದ ಫಲವಿದು. ಇಂತಹ ಸಿನಿಮಾ ಮತ್ತೆ ಮತ್ತೆ ಆಗಲ್ಲ. ರಾಕಿ ಬಾಯ್.. ನಿನ್ನ ಪರಿಶ್ರಮದ ಫಲವನ್ನು ಈಗ ಸುಮ್ಮನೇ ಕುಳಿತು ಅನುಭವಿಸುವ ಕಾಲವಿದು’ ಎಂದು ಸುಮಲತಾ ಯಶ್ ಗೆ ಹೊಗಳಿ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಸಕ್ಸಸ್ ಪಾರ್ಟಿಯಲ್ಲಿ ಯಶ್ ಕೆನ್ನೆಗೆ ಸಿಹಿ ಮುತ್ತು ಕೊಟ್ಟವರಾರು ಗೊತ್ತಾ?