Webdunia - Bharat's app for daily news and videos

Install App

ದರ್ಶನ್ ಅರೆಸ್ಟ್ ಆದ ಮೇಲೆ ಮದರ್ ಇಂಡಿಯಾ, ಬ್ರದರ್ ಇಂಡಿಯಾ ಫುಲ್ ಸೈಲಂಟ್

Krishnaveni K
ಗುರುವಾರ, 20 ಜೂನ್ 2024 (13:34 IST)
ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆದ ಮೇಲೆ ಮದರ್ ಇಂಡಿಯಾ ಸುಮಲತಾ, ಬ್ರದರ್ ಇಂಡಿಯಾ ಅಭಿಷೇಕ್ ಅಂಬರೀಶ್ ಇಬ್ಬರೂ ಸೈಲಂಟ್ ಮೋಡ್ ನಲ್ಲಿದ್ದಾರೆ.

ಸುಮಲತಾ ಅಂಬರೀಶ್ ಸದಾ ದರ್ಶನ್ ರನ್ನು ನನ್ನ ಮಗ ಎನ್ನುತ್ತಿದ್ದರು. ಅಭಿಷೇಕ್ ಅಂಬರೀಶ್ ನನ್ನ ಅಣ್ಣ ಎನ್ನುತ್ತಿದ್ದರು. ಆದರೆ ಹತ್ಯೆ ಕೇಸ್ ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಈ ಇಬ್ಬರೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಮಾತನಾಡಿಲ್ಲ.

ಸುಮಲತಾ ಈ ನಡುವೆ ಸುಲಭವಾಗಿ ಇಸ್ತ್ರಿ ಮಾಡುವ ವಿಧಾನದ ವಿಡಿಯೋವೊಂದನ್ನು ಹಂಚಿಕೊಂಡು ಟ್ರೋಲ್ ಗೊಳಗಾಗಿದ್ದರು. ಮಗ ಅರೆಸ್ಟ್ ಆಗಿದ್ದರೆ ನೀವಿಲ್ಲಿ ಇಸ್ತ್ರಿ ಮಾಡುವುದು ಹೇಗೆ ಎಂದು ವಿಡಿಯೋ ಹಾಕ್ತಿದ್ದೀರಾ ಎಂದು ಟ್ರೋಲ್ ಮಾಡಿದ್ದರು. ಅದರ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರಿಂದಲೂ ಯಾವುದೇ ಪೋಸ್ಟ್ ಇಲ್ಲ.

ಸುಮಲತಾ ಚುನಾವಣೆ ಗೆಲ್ಲಲು ದರ್ಶನ್ ಹಗಲಿರುಳೆನ್ನದೇ ಪ್ರಚಾರ ಮಾಡಿದ್ದರು. ಇತ್ತೀಚೆಗೆ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಮಂಡ್ಯದಲ್ಲಿ ಸಮಾವೇಶ ನಡೆಸಿದಾಗಲೂ ಕೈ ಶಸ್ತ್ರಚಿಕಿತ್ಸೆಯನ್ನೂ ಮುಂದೂಡಿ ಬೆಲ್ಟ್ ಹಾಕಿಕೊಂಡೇ ದರ್ಶನ್ ಸುಮಲತಾ ಜೊತೆ ಬಂದು ನಿಂತಿದ್ದರು. ಅಮ್ಮನಿಗಾಗಿ ಏನು ಬೇಕಾದರೂ ಮಾಡ್ತೀನಿ ಎಂದಿದ್ದರು. ಆದರೆ ಈಗ ದರ್ಶನ್ ಸಂಕಷ್ಟದಲ್ಲಿದ್ದು, ಈ ಇಬ್ಬರೂ ತುಟಿಪಿಟಕ್ ಎನ್ನದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments