ಬೆಂಗಳೂರು: ದೀಪಾವಳಿ ಬಂತೆಂದರೆ ಸಾಕು. ರಸ್ತೆಗಳಲ್ಲಿ ಓಡಾಡುವಂತಿಲ್ಲ. ಯಾಕೆಂದರೆ ಪಟಾಕಿ ಭಯ. ಖುಷಿಗಾಗಿ ಹೊಡೆಯುವ ಪಟಾಕಿಗಳು ಯಾರಿಗೆ ಗಾಯ ಮಾಡುತ್ತದೋ, ಯಾರ ಅಂಗಾಂಗ ಹಾನಿ ಮಾಡುತ್ತದೋ ಎನ್ನುವ ಆತಂಕ.
ಪಟಾಕಿ ಹೊಡೆದು ದುಡ್ಡು ಪೋಲು ಮಾಡುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ವಿಶೇಷ ಮನವಿ ಮಾಡಿದ್ದಾರೆ. ಪಟಾಕಿ ಹೊಡೆಯಲು ಖರ್ಚು ಮಾಡುವ ದುಡ್ಡನ್ನು ಬಡವರಿಗೆ, ಹಸಿವಿನಿಂದ ಒದ್ದಾಡುವವರಿಗೆ ಹೊಟ್ಟೆ ತುಂಬಾ ಆಹಾರ ನೀಡಿ. ಆಗ ಅವರ ಮುಖದಲ್ಲಿ ಮೂಡುವ ನಗುವಿನಿಂದ ಸಿಗುವ ಖುಷಿ ಎಲ್ಲದಕ್ಕಿಂತ ಹೆಚ್ಚು ಎಂದು ಟ್ವಿಟರ್ ಪೇಜ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಿಚ್ಚನ ಮನವಿಗೆ ಅಭಿಮಾನಿಗಳು ಸ್ಪಂದಿಸುತ್ತಾರೋ, ದುಡ್ಡು, ಪರಿಸರ ಹಾಳು ಮಾಡುವುದನ್ನು ನಿಲ್ಲಿಸುತ್ತಾರೋ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ