Webdunia - Bharat's app for daily news and videos

Install App

ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್

Webdunia
ಬುಧವಾರ, 30 ಮೇ 2018 (07:00 IST)
ಬೆಂಗಳೂರು : ಅಭಿಮಾನಿಗಳ ಕಷ್ಟಸುಖಗಳಿಗೆ ಯಾವಾಗಲೂ ಸ್ಪಂದಿಸುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇದೀಗ ಮನೆಬಿಟ್ಟು ಹೋದ ತಮ್ಮ ಪುಟ್ಟ ಅಭಿಮಾನಿಯನ್ನು ವಾಪಾಸು ಮನೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.


ಹೌದು. ಶ್ರೀನಗರದಲ್ಲಿ ವಾಸವಾಗಿರುವ ರಮೇಶ್-ರೂಪಾ ದಂಪತಿಯ ಮಗ ಮಣಿಕಂಠ ಎಂಬ ಬಾಲಕನು ಅಪ್ಪ-ಅಮ್ಮ ಯಾವುದೋ ಸಣ್ಣ ವಿಷಯಕ್ಕೆ ಬೈದ್ರು ಅಂತಾ ಮನೆಬಿಟ್ಟು ಹೋಗಿದ್ದಾನೆ. ಮಗನ್ನು ಕಾಣದೆ ಕಂಗಲಾದ ಹೆತ್ತವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕೂಡ ಆತನ ಸುಳಿವಿಲ್ಲ. ಈ ವಿಚಾರ ತಿಳಿದ ನಟ ಸುದೀಪ್ ಅವರು ವಿಡಿಯೋವೊಂದರ ಮೂಲಕ,’ ಅಪ್ಪ-ಅಮ್ಮನ ಪ್ರೀತಿಯ ಮುಂದೆ ಯಾವುದೂ ದೊಡ್ಡದಲ್ಲ. ನನಗೋಸ್ಕರ ಮನೆಗೆ ಹೋಗು. ನಿನ್ನ ಅಣ್ಣನ ಸ್ಥಾನದಲ್ಲಿ ನಿಂತು ಹೇಳುತ್ತೇನೆ. ದಯವಿಟ್ಟು ಮನೆಗೆ ಹೋಗು. ಆಮೇಲೆ ನಾನೇ ಮನೆಗೆ ಬಂದು ನಿನ್ನ ಭೇಟಿಯಾಗ್ತೇನೆ’ ಎಂದು ಮನವಿ ಮಾಡಿದ್ದಾರೆ.


ಸುದೀಪ್ ಅವರ ಅಪ್ಪಟ ಅಭಿಮಾನಿಯಾದ ಮಣಿಕಂಠ ಈ ವಿಡಿಯೋ ನೋಡಿಯಾದರೂ ಅಮ್ಮನ ಮಡಿಲು ಸೇರುವಂತಾಗಲಿ ಎಂಬುದು ಸುದೀಪ್ ಅವರ ಆಶಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments