Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಜನರ ಕಷ್ಟಕ್ಕೆ ನೆರವಾದ ಶುಭಾ ಪೂಂಜಾ

ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಜನರ ಕಷ್ಟಕ್ಕೆ ನೆರವಾದ ಶುಭಾ ಪೂಂಜಾ
ಬೆಂಗಳೂರು , ಶನಿವಾರ, 15 ಮೇ 2021 (10:37 IST)
ಬೆಂಗಳೂರು: ಕೊರೋನಾದಿಂದಾಗಿ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಅರ್ಧಕ್ಕೇ ರದ್ದಾಗಿತ್ತು. ಮನೆಯಿಂದ ಹೊರಬರುವ ಮೊದಲು ಶುಭಾ ಪೂಂಜಾ ಸೇರಿದಂತೆ ಸ್ಪರ್ಧಿಗಳು ಕೊರೋನಾ ವಾರಿಯರ್ ಗಳಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು.

 

ಇದನ್ನೀಗ ಶುಭಾ ಪೂಂಜಾ ಮಾಡಿ ತೋರಿಸಿದ್ದಾರೆ. ಶುಭಾ ಪೂಂಜಾ ತಮ್ಮ ಮನೆಯ ಅಕ್ಕಪಕ್ಕವಿರುವ ಬಡ ಕಾರ್ಮಿಕರು, ಬಡವರಿಗೆ ರೇಷನ್ ಕಿಟ್ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ನನ್ನಿಂದಾದ ಪುಟ್ಟ ಸಹಾಯವನ್ನು ಮಾಡುತ್ತಿದ್ದೇನೆ. ನನ್ನ ಮನೆಯ ಪಕ್ಕದಲ್ಲೇ ಇರುವ ಬಡವರಿಗೆ ರೇಷನ್ ಕಿಟ್ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಶುಭಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದ ನಟಿಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಹರಿಗೆ ಉಪೇಂದ್ರ ವತಿಯಿಂದ ಆಹಾರ ಕಿಟ್ ವಿತರಣೆ