Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗ ಬಗ್ಗೆ ಹಳೆಯ ವಿವಾದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಶ್ರುತಿ ಹಾಸನ್

ಕನ್ನಡ ಚಿತ್ರರಂಗ ಬಗ್ಗೆ ಹಳೆಯ ವಿವಾದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಶ್ರುತಿ ಹಾಸನ್
ಬೆಂಗಳೂರು , ಬುಧವಾರ, 17 ಫೆಬ್ರವರಿ 2021 (09:45 IST)
ಬೆಂಗಳೂರು: ಕನ್ನಡ ಸಿನಿಮಾದಲ್ಲಿ ನಟಿಸುವ ಯಾವುದೇ ಪ್ಲ್ಯಾನ್ ನನಗಿಲ್ಲ ಎಂದು ಶ್ರುತಿ ಹಾಸನ್ ಹಿಂದೆ ನೀಡಿದ್ದ ವಿವಾದಿತ ಹೇಳಿಕೆ ಈಗ ಸಲಾರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದ ಸಮಯದಲ್ಲಿ ಚಾಲ್ತಿಗೆ ಬಂದಿತ್ತು.


ಹಿಂದೆ ಕನ್ನಡ ಸಿನಿಮಾ ಬಗ್ಗೆ ಉಡಾಫೆ ಮಾಡಿದ್ದ ಶ್ರುತಿ ಕೊನೆಗೂ ಈಗ ಕನ್ನಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಬಹುಭಾಷಾ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನೆಟ್ಟಿಗರು ಅವರ ಕಾಲೆಳೆದಿದ್ದರು. ಇದೀಗ ಶ್ರುತಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ಹಿಂದೆ ನಾನು ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ಹಬ್ಬಿದ್ದಕ್ಕೆ ಸ್ಪಷ್ಟನೆ ಕೊಡುವಾಗ ಹಾಗೆ ಹೇಳಿದ್ದೆ. ನನಗೆ ಎಲ್ಲಾ ಚಿತ್ರರಂಗವೂ ಒಂದೇ. ಎಲ್ಲವನ್ನೂ ಗೌರವಿಸುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ರಾಜಕುಮಾರ್ ಅನಾರೋಗ್ಯ; ಆಸ್ಪತ್ರೆಗೆ ದಾಖಲು