Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಂದೇ ಪಾತ್ರ, ಬೇರೆ ಬೇರೆ ಸಿನಿಮಾ!

ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಂದೇ ಪಾತ್ರ, ಬೇರೆ ಬೇರೆ ಸಿನಿಮಾ!
ಬೆಂಗಳೂರು , ಸೋಮವಾರ, 2 ನವೆಂಬರ್ 2020 (11:20 IST)
ಬೆಂಗಳೂರು: ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಮಹಾಭಾರತದ ಅಶ್ವತ್ಥಾಮ ಪಾತ್ರದ ಕುರಿತಾಗಿ ಪೌರಾಣಿಕ ಸಿನಿಮಾವೊಂದನ್ನು ಮಾಡುವುದಾಗಿ ಘೋಷಿಸಿದ್ದು, ಇದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಲಿದ್ದಾರೆ.


ಶಿವಣ್ಣ ಈ ಮೂಲಕ ಅಶ್ವತ್ಥಾಮನ ಪಾತ್ರ ಮಾಡಲಿದ್ದಾರೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಿಸಿದ್ದ ಸಚಿನ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದ್ದು, ಸದ್ಯದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ವಿಶೇಷವೆಂದರೆ ಇದಕ್ಕೂ ಮೊದಲು ನಿರ್ದೇಶಕ ಅನೂಪ್ ಭಂಡಾರಿ ಕೂಡಾ ಅಶ್ವತ್ಥಾಮ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಸಿನಿಮಾಕ್ಕೆ ಅವರು ಕಿಚ್ಚ ಸುದೀಪ್ ರನ್ನು ನಾಯಕರಾಗಿ ಘೋಷಿಸಿದ್ದರು. ಇದೀಗ ಒಂದೇ ಕಥಾ ಪಾತ್ರ ಕುರಿತಾಗಿ ಇಬ್ಬರು ದಿಗ್ಗಜ ಹೀರೋಗಳು ಸಿನಿಮಾ ಮಾಡಲಿದ್ದು, ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಕುಮಾರ್ ಫಸ್ಟ್ ಸಿನಿಮಾ ಟೈಟಲ್ ನೋಡಿ ವಾವ್ ಎಂದ ವೀಕ್ಷಕರು