Select Your Language

Notifications

webdunia
webdunia
webdunia
webdunia

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್
Hasana , ಶುಕ್ರವಾರ, 21 ಅಕ್ಟೋಬರ್ 2016 (12:26 IST)
ಹಾಸನ:  ಕಾವೇರಿ ವಿವಾದ ವಿಚಾರದಲ್ಲಿ ಮಾಧ್ಯಮಗಳಿಗೆ ಸವಾಲು ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಹಾಸನದ ಹಾಸನಾಂಬೆ ದರ್ಶನಕ್ಕೆ ಪತ್ನಿ ಸಮೇತ ಬಂದಿದ್ದ ಶಿವರಾಜ್ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ, ಎಲ್ಲರೂ ನಮ್ಮವರೇ. ಯಶ್ ನಮ್ಮ ಕುಟುಂಬ ಸದಸ್ಯರಿದ್ದಂತೆ. ಒಂದು ಮಾತು ಬರುತ್ತೆ ಹೋಗುತ್ತೆ. ಅದನ್ನೆಲ್ಲಾ ಮರೆಯೋಣ. ಎಲ್ಲದಕ್ಕೂ ಇದೇ ಪರಿಹಾರ” ಎಂದು ಉತ್ತರಿಸಿದರು.

ಕಾವೇರಿ ಹೋರಾಟದ ವಿಷಯಕ್ಕೆ ಸಂಬಂಧಿಸಿದಂತೆ ಯಶ್  ನೀಡಿದ ಹೇಳಿಕೆ ಸರಿಯಿಲ್ಲ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಮಾಡಿತ್ತು. ಇದು ವಿವಾದಕ್ಕೆ ತಿರುಗಿ ಯಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಲ್ಲದೆ, ಚರ್ಚೆಗೆ ಬರಲು ಸಿದ್ಧ ಎಂದು ಸವಾಲು ಹಾಕಿದ ವಿಡಿಯೋ ಅಪ್ ಲೋಡ್ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

“ಮನೆದೇವ್ರು” ಧಾರವಾಹಿಯ ಅರ್ಚನಾ ಈಗ ಸಿನಿಮಾ ನಾಯಕಿ