Select Your Language

Notifications

webdunia
webdunia
webdunia
webdunia

ಜಗ್ಗೇಶ್ ಹೇಳಿಕೆ ಶಿವಣ್ಣ ವಿರೋಧ

ಜಗ್ಗೇಶ್ ಹೇಳಿಕೆ ಶಿವಣ್ಣ ವಿರೋಧ
Bangalore , ಶುಕ್ರವಾರ, 3 ಮಾರ್ಚ್ 2017 (10:28 IST)
ಬೆಂಗಳೂರು: ಕನ್ನಡ ಚಿತ್ರರಂಗ ಇದೀಗ ಡಬ್ಬಿಂಗ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡು ಕೂತಿದೆ. ಒಂದೆಡೆ ಜಗ್ಗೇಶ್ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದರೆ, ಶಿವರಾಜ್ ಕುಮಾರ್ ಇದರಿಂದ ಪರಿಹಾರ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.


ತಮಿಳಿನ ಎನ್ನೈ ಅರಿಂದಾಲ್ ಕನ್ನಡಕ್ಕೆ ಡಬ್ ಆಗಿ ಬರುತ್ತಿರುವ ಹಿನ್ನಲೆಯಲ್ಲಿ, ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗಲು ಬಿಡಲ್ಲ. ಒಂದು ವೇಳೆ ಬಿಡುಗಡೆ ಮಾಡಿದರೆ ಅಂತಹ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೀವಿ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದರು.

ಆದರೆ ಇಂತಹ ಆವೇಶಭರಿತ ಮಾತುಗಳಿಂದ ಕೆಲಸವಾಗದು ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅದರ ಬದಲು ಎಲ್ಲರೂ ಒಟ್ಟಾಗಿ ಕೂತು ಪರಿಹಾರದ ಬಗ್ಗೆ ಮಾತುಕತೆ ನಡೆಸಬೇಕು. ಆವೇಶಭರಿತರಾಗಿ ಮಾತನಾಡುವ ಬದಲು ಜನರಿಗೆ ಸತ್ಯ ಮನವರಿಕೆ ಮಾಡಿಕೊಡಬೇಕು ಎಂದು ಶಿವಣ್ಣ ಜಗ್ಗೇಶ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸಾರ್ ಆದ ’ಅನಾರ್ಕಲಿ’ ಹಾಟ್ ಸೀನ್ ಲೀಕ್