Select Your Language

Notifications

webdunia
webdunia
webdunia
webdunia

ಮನೆ ಹತ್ರ ಯಾರೂ ಬರ್ಬೇಡಿ ಎಂದ್ರು ಶಿವರಾಜ್ ಕುಮಾರ್

ಮನೆ ಹತ್ರ ಯಾರೂ ಬರ್ಬೇಡಿ ಎಂದ್ರು ಶಿವರಾಜ್ ಕುಮಾರ್
ಬೆಂಗಳೂರು , ಬುಧವಾರ, 7 ಜುಲೈ 2021 (10:28 IST)
ಬೆಂಗಳೂರು: ಕೊರೋನಾ ಕಾರಣದಿಂದ ಇತ್ತೀಚೆಗೆ ಸ್ಟಾರ್ ನಟರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವುದನ್ನೇ ಬಿಟ್ಟಿದ್ದಾರೆ. ಈಗ ನಟ ಶಿವರಾಜ್ ಕುಮಾರ್ ಕೂಡಾ ಅದೇ ಸಾಲಿಗೆ ಸೇರಿಕೊಳ್ಳುತ್ತಿದ್ದಾರೆ.


ಜುಲೈ 12 ಕ್ಕೆ ಶಿವಣ್ಣ ಬರ್ತ್ ಡೇ. ಆದರೆ ಕೊರೋನಾ ಕಾರಣದಿಂದಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆ ದಿನ ಕಾರಣಾಂತರದಿಂದ ನಾನು ಮನೆಯಲ್ಲಿರಲ್ಲ. ಯಾರೂ ಇದಕ್ಕಾಗಿ ಮನೆ ಬಳಿ ಬರಬೇಡಿ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯವೇ ನನಗೆ ಮುಖ್ಯ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನು, ಅಭಿಮಾನಿಗಳು ಇದಕ್ಕಾಗಿ ಬೇಸರವಾಗಬೇಕಿಲ್ಲ. ದೇವರದಯದಿಂದ ಈಗಷ್ಟೇ ಕೊರೋನಾ ಕಡಿಮೆಯಾಗಿದೆ. ಹಾಗಂತ ಯಾರೂ ಮೈಮರೆಯುವುದು ಬೇಡ. ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ವ್ಯಾಕ್ಸಿನ್ ತಪ್ಪದೇ ಪಡೆದುಕೊಳ್ಳಿ. ಆದಷ್ಟು ಬೇಗ ಕೊರೋನಾ ಮುಗಿದ ಮೇಲೆ ನಾವೆಲ್ಲಾ ಒಟ್ಟು ಸೇರೋಣ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಶಿವಣ್ಣ ವಿಡಿಯೋ ಸಂದೇಶ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ!