ನಾನು ಗೀತಾಳನ್ನು ಪಡೆಯಲು ಅರ್ಹನಾ, ಈ ಜೀವನ ಸಾಕಲ್ವಾ ಎನಿಸಿಬಿಟ್ಟಿತ್ತು: ಶಿವರಾಜ್ ಕುಮಾರ್

Krishnaveni K
ಶನಿವಾರ, 1 ಫೆಬ್ರವರಿ 2025 (10:49 IST)
ಬೆಂಗಳೂರು: ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮರಳಿದ ಶಿವಣ್ಣ ಬಿ ಗಣಪತಿ ಜೊತೆಗಿನ ಸಂದರ್ಶನದಲ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ. ನಾನು ಗೀತಾಳಂತಹ ಪತ್ನಿಯನ್ನು ಪಡೆಯಲು ಅರ್ಹನಾ ಅನಿಸಿಬಿಡುತ್ತೆ ಕೆಲವೊಮ್ಮೆ ಎಂದು ಭಾವುಕರಾಗಿದ್ದಾರೆ.

ತಮ್ಮ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ, ತಾವು ಎದುರಿಸಿದ ಸಂಘರ್ಷಗಳ ಬಗ್ಗೆ ಖ್ಯಾತ ಸಿನಿಮಾ ಪತ್ರಕರ್ತ ಬಿ ಗಣಪತಿ ಜೊತೆಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಮನದಾಳವನ್ನು ಹಂಚಿಕೊಂಡಿದ್ದಾರೆ.

ನನಗೆ ಇಂತಹದ್ದೊಂದು ಖಾಯಿಲೆಯಿದೆ ಎಂದು ಗೊತ್ತಾದಾಗ ನನಗೇ ಯಾಕೆ ಹೀಗಾಯಿತು, ಹೇಗೆ ಪ್ರತಿಕ್ರಿಯಿಸಬೇಕು, ಅಳಬೇಕೋ ಏನು ಮಾಡಬೇಕು ಎಂದೇ ಗೊತ್ತಾಗಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಈ ಖಾಯಿಲೆ ಇದೆ ಎಂದು ಗೊತ್ತಾದಾಗ ಬೇಗನೇ ನನ್ನ ಕೆಲಸ ಮುಗಿಸಿಬಿಡೋಣ ಎನಿಸಿತು. 45 ಸಿನಿಮಾ, ಕೆಲವೊಂದು ಶೋ, ಜಾಹೀರಾತುಗಳು ಬಾಕಿಯಿತ್ತು. ಸಾಕು, ಅದೆಲ್ಲವನ್ನೂ ಮಾಡಿ ಮುಗಿಸೋಣ, ಸಾಕು ಎನಿಸಿತ್ತು. ಮೂರು ಬಾರಿ ಕೀಮೋಥೆರಪಿ ಮಾಡಿದ ಮೇಲೆ ಸ್ವಲ್ಪ ಭರವಸೆ ಬಂತು. ನನಗೆ ಶಕ್ತಿಯಾಗಿ ನಿಂತಿದ್ದು ಗೀತಾ. ನನಗೆ ಒಬ್ಬ ಪತ್ನಿಯಾಗಿ, ಗೆಳತಿಯಾಗಿ ಜೊತೆಯಾಗಿದ್ದಳು. ಗಂಡ-ಹೆಂಡತಿ ನಡುವೆ ಏನೇ ಇರಬಹುದು. ಆದರೆ ಇಂತಹ ಸಂದರ್ಭದಲ್ಲಿ ಅವನು ನನ್ನವನು ಎಂದು ಕಾಪಾಡಿಕೊಳ್ಳುವುದು ಇದೆಯಲ್ಲಾ ಅದಕ್ಕೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಕೆಲವೊಮ್ಮೆ ನನಗೇ ಅನಿಸುತ್ತೆ, ನಾನು ಗೀತಾಳನ್ನು ಪಡೆಯಲು ಅರ್ಹನಾ ಅಂತ’ ಎಂದು ಶಿವಣ್ಣ ಕಣ್ಣೀರು ಹಾಕಿದ್ದಾರೆ. ನಾನು ಅವಳಿಗೆ ಸಾರಿ ಹೇಳಬಹುದಷ್ಟೇ, ಸಾರಿ ಎನ್ನುವುದು ಚಿಕ್ಕಪದ ಎಂದು ಭಾವುಕರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಂಧನಕ್ಕೊಳಗಾದ ನೀಲಿ ತಾರೆ, ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ, ಆರೋಪ ಸಾಬೀತಾದಲ್ಲಿ 15ವರ್ಷ ಜೈಲೂಟ

ಮಗುವಿನ ಆಗಮನದ ಖುಷಿಯಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ನ ಸುಷ್ಮಾ ರಾಜ್‌

ರಿಷಬ್ ಕಾಲ ಮೇಲೆ ಮಲಗಿದ್ದು ದೈವವಲ್ಲ ಬದಲಾಗಿ ನರ್ತಕ, ಭಾರೀ ಟೀಕೆ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ಮುಂದಿನ ಸುದ್ದಿ
Show comments