Select Your Language

Notifications

webdunia
webdunia
webdunia
webdunia

ಪತ್ನಿಗಾಗಿ ಮತ್ತೆ ಪ್ರಚಾರ ಕಣಕ್ಕೆ ಧುಮುಕಿದ ಶಿವರಾಜ್ ಕುಮಾರ್

Shiva Rajkumar

Krishnaveni K

ಶಿವಮೊಗ್ಗ , ಮಂಗಳವಾರ, 9 ಏಪ್ರಿಲ್ 2024 (09:03 IST)
ಶಿವಮೊಗ್ಗ: ಇತ್ತೀಚೆಗಷ್ಟೇ ಅನಾರೋಗ್ಯಕ್ಕೀಡಾಗಿದ್ದ ನಟ ಶಿವರಾಜ್ ಕುಮಾರ್ ಇದೀಗ ಮತ್ತೆ ಪತ್ನಿ ಗೀತಾ ಪರ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪತ್ನಿಯನ್ನು ಗೆಲ್ಲಿಸುವ ಪಣ ತೊಟ್ಟಿರುವ ಶಿವರಾಜ್ ಕುಮಾರ್ ಈ ಮೊದಲು ಸತತವಾಗಿ ಬಿಸಿಲು ಲೆಕ್ಕಿಸದೇ ಪ್ರಚಾರ ಕಾರ್ಯ ಮಾಡಿದ್ದರು.

ಸತತ ಓಡಾಟದಿಂದಾಗಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಒಂದು ವಾರದ ವಿಶ್ರಾಂತಿ ಬಳಿಕ ಶಿವಣ್ಣ ಮತ್ತೆ ಚುನಾವಣಾ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಆಗಿ ಅಲ್ಲ, ಗೀತ ಗಂಡನಾಗಿ ಬಂದಿದ್ದೇನೆ. ಪತ್ನಿಗಾಗಿ ಮತ್ತೆ ಪ್ರಚಾರ ಕಣಕ್ಕೆ ಬಂದಿರುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಮತ್ತೆ ಶಿವಣ್ಣ ಶಿವಮೊಗ್ಗದಲ್ಲಿ ಆಕ್ಟಿವ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ಕುಮಾರ್ ಜೋಡಿ ಜತೆ ಕಾಲ ಕಳೆದ ಕಿಚ್ಚ ಫ್ಯಾಮಿಲಿ