Publish Date: Tue, 09 Apr 2024 (08:54 IST)
Updated Date: Tue, 09 Apr 2024 (08:58 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹಾಗೂ ಶಾಸಕ ಎಂ. ಕೃಷ್ಣಪ್ಪ ಅವರು ಇಂದು “ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣ”ದ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು.
ನಿನ್ನೆ ಸಂಜೆ ಡಾ ಸಿಎನ್ ಮಂಜುನಾಥ್ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಮೆಟ್ರೋ ಪ್ರಯಾಣಿಕರ ಜೊತೆ ತಮ್ಮನ್ನು ಗೆಲ್ಲಿಸುವಂತೆ ಪ್ರಾರ್ಥಿಸಿದ್ದಾರೆ. ಡಾ. ಸಿಎನ್ ಮಂಜುನಾಥ್ ಎಂದರೆ ರಾಜಕಾರಣಿಯಾಗಿ ಅಲ್ಲ. ವೈದ್ಯರಾಗಿ ಹೆಸರು ಮಾಡಿದವರು. ಹೀಗಾಗಿ ಅವರನ್ನು ನೋಡಲು, ಅವರ ಜೊತೆ ಸೆಲ್ಫೀ ತೆಗೆದುಕೊಳ್ಳಲು ಜನ ನೂಕು ನುಗ್ಗಲು ನಡೆಸಿದರು.