Select Your Language

Notifications

webdunia
webdunia
webdunia
webdunia

ಕಲಾವಿದರ ಸಂಘದಿಂದ ಶರತ್ ಕುಮಾರ್, ರಾಧಾರವಿ ಅಮಾನತು

ಕಲಾವಿದರ ಸಂಘದಿಂದ ಶರತ್ ಕುಮಾರ್, ರಾಧಾರವಿ ಅಮಾನತು
Chennai , ಸೋಮವಾರ, 28 ನವೆಂಬರ್ 2016 (12:17 IST)
ಚೆನ್ನೈ: ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ತಮಿಳು ನಟ ಶರತ್ ಕುಮಾರ್ ಮತ್ತು ರಾಧಾರವಿ ಅವರನ್ನು ದಕ್ಷಿಣ ಭಾರತ ಕಲಾವಿದರ ಸಂಘದಿಂದ ಅಮಾನತುಗೊಳಿಸಲಾಗಿದೆ. ಸಂಘದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಾರ್ಯದರ್ಶಿ ವಿಶಾಲ್ ತಿಳಿಸಿದ್ದಾರೆ.

ಇವರಿಬ್ಬರು ತಮ್ಮಅಧಿಕಾರಾವಧಿಯಲ್ಲಿ ಜೀವಿತಾವಧಿಗೆ ತಾವು ಸಂಘದ ಟ್ರಸ್ಟಿಗಳಾಗಿರುವಂತಹ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದರು. ಇದು ಸಾಬೀತಾದ ಹಿನ್ನಲೆಯಲ್ಲಿ ಸರ್ವರ ಸಮ್ಮತಿಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಖಜಾಂಜಿ ನಟ ಕಾರ್ತಿ ಹೇಳಿದ್ದಾರೆ.

ಅಲ್ಲದೆ ಇವರಿಬ್ಬರ ವಿರುದ್ಧ ಕೇಸು ದಾಖಲಿಸುವಂತೆ ಸಂಘ ನ್ಯಾಯಾಲಯದ ಮೊರೆ ಹೋಗಿದೆ. ಇವರಿಬ್ಬರಲ್ಲದೆ ಮಾಜಿ ಟ್ರಸ್ಟಿ ವೇಗೈ ಚಂದ್ರಶೇಖರ್ ಸಂಘದ 1.65 ಕೋಟಿ ರೂ. ದುರುಪಯೋಗಪಡಿಸಿದ್ದಾರೆಂದು ಅದು ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಲ್ಲಿ ಫೋನ್ ಬಳಕೆಯಾಗಿದೆಯಾ?! ಫೇಸ್ ಬುಕ್ ನಲ್ಲಿ ಹರಿದಾಡ್ತಿದೆ ಫೋಟೋ!!