Select Your Language

Notifications

webdunia
webdunia
webdunia
webdunia

ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಕ್ಕೆ ಕಾರಣ ಬಯಲು

Darshan

Krishnaveni K

ಬೆಂಗಳೂರು , ಶುಕ್ರವಾರ, 14 ಜೂನ್ 2024 (12:10 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದಕ್ಕೆ ಕಾರಣವೇನೆಂದು ಬಯಲಾಗಿದೆ.

ದರ್ಶನ್ ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಒಳಗಡೆ ಏನಾಗುತ್ತಿದೆ ಎಂದು ಹೊರಗಡೆ ಗೊತ್ತಾಗದಂತೆ ಮುಚ್ಚಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ. ಆದರೆ ಪೊಲೀಸರು ಇದರ ಹಿಂದಿರುವ ಕಾರಣವೇನೆಂದು ವಿವರಣೆ ನೀಡಿಲ್ಲ.

ಆದರೆ ಈಗ ಇಂತಹದ್ದೊಂದು ಕ್ರಮ ಕೈಗೊಳ್ಳಲು ದರ್ಶನ್ ಮನವಿಯೇ ಕಾರಣ ಎನ್ನಲಾಗುತ್ತಿದೆ. ಠಾಣೆಗೆ ಸೈಡ್ ವಾಲ್ ಗಳಿಗೆ ಮೇಲಿನ ಅಂತಸ್ತುಗಳಿಗೆ ಶಾಮಿಯಾನ ಹಾಕಿ ಮುಚ್ಚಿದ್ದು ದರ್ಶನ್ ಗಾಗಿಯೇ ಎಂದು ತಿಳಿದುಬಂದಿದೆ. ದರ್ಶನ್ ಆಂಡ್ ಗ್ಯಾಂಗ್ ಗೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ ಎಂಬ ಆರೋಪಗಳೂ ಇದರ ಹಿಂದೆಯೇ ಕೇಳಿಬಂದಿದೆ.

ಕಳೆದ ಮೂರು ದಿನಗಳಿಂದ ದರ್ಶನ್ ಪೊಲೀಸ್ ಠಾಣೆಯಲ್ಲೇ ಕಳೆದಿದ್ದಾರೆ. ಈ  ವೇಳೆ ಪೊಲೀಸರಿಗೆ ‘ನನಗೆ ಒಂದೇ ಕಡೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಬಾಡಿ ರಿಲ್ಯಾಕ್ಸ್ ಆಗಬೇಕು. ಅದಕ್ಕೆ ಆಚೀಚೆ ಓಡಾಡಬೇಕು. ಕೈ ನಡುಗುತ್ತದೆ, ಸಿಗರೇಟು ಕೊಡಿ’ ಎಂದು ಬೇಡಿಕೆಯಿಟ್ಟಿದ್ದಾರೆ.  ಹೀಗಾಗಿಯೇ ದರ್ಶನ್ ಗೆ ಓಡಾಡಲು ಸೈಡ್ ವಾಲ್ ಹಾಕಿಸಿಕೊಡಲು ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಒಂದು ಪೊಲೀಸ್ ಠಾಣೆಗೆ ಎಷ್ಟೋ ಮಂದಿ ಅಪರಾಧ ಪ್ರಕರಣದಲ್ಲಿ ಬಂದು ಹೋಗುತ್ತಾರೆ. ಆಧರೆ ಯಾರಿಗೂ ಇಲ್ಲದ ಟ್ರೀಟ್ ಮೆಂಟ್ ದರ್ಶನ್ ಗೆ ಯಾಕೆ ಎಂಬ ಆಕ್ರೋಶ ಕೇಳಿಬಂದಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸಿನಿಮಾಗೆ ದರ್ಶನ್ ಎಷ್ಟು ಕೋಟಿ ಅಡ್ವಾನ್ಸ್ ಪಡೆಯುತ್ತಾರೆ