Select Your Language

Notifications

webdunia
webdunia
webdunia
webdunia

ಖಳನಟ ಸತ್ಯಜಿತ್ ಗೆ ನೆರವಿನ ಮಹಾಪೂರ

ಸತ್ಯಜಿತ್
Bangalore , ಭಾನುವಾರ, 30 ಅಕ್ಟೋಬರ್ 2016 (13:54 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಖಳನಟನಾಗಿ ಸೇವೆ ಸಲ್ಲಿಸುತ್ತಿರುವ ಸತ್ಯಜಿತ್ ಗೆ ಗಾಂಗ್ರಿನ್ ನಿಂದಾಗಿ ಕಾಲು ಕತ್ತರಿಸಬೇಕಾಗಿ ಬಂದಿತ್ತು.

ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಅಸಹಾಯಕರಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸತ್ಯಜಿತ್ ಬಗ್ಗೆ ಕೆಲವು ಮಾಧ್ಯಮಗಳು ಗಮನ ಸೆಳೆದಿದ್ದವು. ಇದಕ್ಕೆ ಹಲವರು ಸ್ಪಂದಿಸಿದ್ದು, ನಟನಿಗೆ ನೆರವಿನ ಮಹಾಪೂರ ಹರಿದು ಬರುತ್ತಿದೆ.

ಸರ್ಕಾರ ತನಗೆ ಸಹಾಯ ಮಾಡಬೇಕೆಂದು ಮಾಧ್ಯಮಗಳ ಮೂಲಕ ಸತ್ಯ ಜಿತ್ ಮನವಿ ಕೂಡಾ ಮಾಡಿಕೊಂಡಿದ್ದರು.  ಆಪ್ತಮಿತ್ರ, ಕಲ್ಲರಳಿ ಹೂವಾಗಿ, ವಿಷ್ಣು ಸೇನಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಪೋಷಕ ನಟರಾಗಿ ಅಭಿನಯಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಕಿರಿಕ್ ಮೂಲ ಯಾವುದು?