Select Your Language

Notifications

webdunia
webdunia
webdunia
webdunia

ಹೊಂಬಾಳೆ ಪಿಲಂಸ್ ನಿರ್ಮಾಣದ ಸಿನಿಮಾಗೆ ಮತ್ತೆ ಸಪ್ತಮಿ ಗೌಡ ನಾಯಕಿ

ಹೊಂಬಾಳೆ ಪಿಲಂಸ್ ನಿರ್ಮಾಣದ ಸಿನಿಮಾಗೆ ಮತ್ತೆ ಸಪ್ತಮಿ ಗೌಡ ನಾಯಕಿ
ಬೆಂಗಳೂರು , ಮಂಗಳವಾರ, 7 ಮಾರ್ಚ್ 2023 (08:50 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ದೊಡ್ಮನೆ ಹುಡುಗ ಯುವರಾಜ್ ಕುಮಾರ್ ನಾಯಕರಾಗಿರುವ ಮೊದಲ ಸಿನಿಮಾ ‘ಯುವ’ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ.

ಕಾಂತಾರ ಸಿನಿಮಾವೂ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿತ್ತು. ಈ ಸಿನಿಮಾ ಸಪ್ತಮಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಇದಾದ ಬಳಿಕ ಅವರು ಹಿಂದಿಯಲ್ಲಿ ಒಂದು ಸಿನಿಮಾ ಮತ್ತು ಕನ್ನಡದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ.

ಇದೀಗ ಯುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಮತ್ತೆ ಹೊಂಬಾಳೆ ಫಿಲಂಸ್ ಜೊತೆ ಕೈ ಜೋಡಿಸಿದ್ದಾರೆ. ಕಾಂತಾರ ಬಳಿಕ ಸಾಲು ಸಾಲು ಆಫರ್ ಗಳು ಸಪ್ತಮಿಗೆ ಬರುತ್ತಿವೆ. ಆದರೆ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಅವರು ಚ್ಯೂಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಭಾಯಿ ಯಶ್ ಗೆ ಅಸಭ್ಯ ಪದ ಬಳಕೆ: ತೆಲುಗು ನಿರ್ದೇಶಕನ ವಿರುದ್ಧ ಯಶ್ ಫ್ಯಾನ್ಸ್ ಗರಂ